Nov 24, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೩

ನಮ್ಮ ದೇಶದಲ್ಲಿ ಬಹಳಷ್ಟು ಜನ ದೊಡ್ಡವರು ದೇಶಭಕ್ತರಿದ್ದರು. ಗಾಂಧೀಜಿ, ಸಾವರ್ಕರ್, ಸುಭಾಶ್ ಚಂದ್ರ ಬೋಸ್ ಮುಂತಾದವರು. ಈ ರೀತಿಯಾಗಿ ದೇಶಭಕ್ತರಾಗಿದ್ದಂತಹ ದೊಡ ವ್ಯಕ್ತಿಗಳು ಇಂಗ್ಲೆಂಡ್ ನಲ್ಲಿ ಬಹಳ ಕಡಿಮೆ ಜನರಿದ್ದರು. ಆದರೆ ಬ್ರಿಟಿಷರು ನಮ್ಮನ್ನ ಆಳಿದರು, ನಾವು ಸೋತೆವು. ೧೫ ಇಂಗ್ಲೆಡ್ ಅನ್ನು ನಮ್ಮ ದೇಶದಲ್ಲಿ ಇಡಬಹುದು. ಆದರೂ ನಾವು ಸೋತೆವು. ಅಂದರೆ ನಾವು ಎಷ್ಟೇ ಸಮರ್ಥರಾಗಿದ್ದರೂ ನಾವು ನಮಗಿಂತ ಅಸಮರ್ಥರಾದವರ ಮುಂದೆ ಸೋತಿದ್ದೇವೆ. ಯಾಕೆ ನಾವು ಸೋತ್ವಿ?

ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯವರು ಇಂಗ್ಲೆಂಡ್ ಮೇಲೆ ಪ್ರತಿನಿತ್ಯ ಬಾಂಬುಗಳನ್ನು ಹಾಕ್ತಾಯಿರ್ತಾರೆ. ಒಂದು ದಿನ ಇಂಗ್ಲೆಂಡಿನ ಪೋಲೀಸಿನವರು ಒಬ್ಬನನ್ನ ಬಂಧಿಸ್ತಾರೆ. ಅವನು ಜರ್ಮನಿಯ ಸಿಐಡಿ ಅಂತ ಹೇಳಿ ಅರೆಸ್ಟ್ ಮಾಡ್ತಾರೆ. ಅವನು ಪ್ರತಿನಿತ್ಯ ಇಂಗ್ಲೆಂಡಿನ ರಹಸ್ಯಗಳನ್ನ ಜರ್ಮನಿಗೆ ತಿಳಿಸ್ತಿರ್ತಾನೆ ಅಂತ. ವಿಚಾರಣೆ ಎಲ್ಲ ಆಗುತ್ತೆ. ಜರ್ಮನಿಯವನಿಗೆ ಕುತೂಹಲ ತಡೆಯಲಾರದೆ ಕೇಳ್ತಾನೆ 'ನನ್ನನ್ನ ಹೇಗೆ ಹಿಡಿದ್ರಿ? ಯಾವ ಡಿಪಾರ್ಟ್ ಮೆಂಟ್ ನನ್ನನ್ನ ಹಿಡಿದಿದ್ದು?, ಹೇಗೆ ನನ್ನ ಹಿಡಿದದ್ದು? ' ಅಂತ. ಅದಕ್ಕೆ ಪೋಲೀಸಿನವರು 'ಯಾವ ಡಿಪಾರ್ಟ್ ಮೆಂಟೂ ಅಲ್ಲ. ನೀನು ಪ್ರತಿ ದಿನ ತಿಂಡಿ ತಿನ್ನಲು ಹೋಗುತ್ತಿದ್ದ ಹೋಟೆಲಿನ ಮಾಣಿ ನಿನ್ನನ್ನ್ದು ಹಿಡಿದುಕೊಟ್ಟದ್ದು ಅಂತ!'.

ಅದನ್ನು ಕೇಳಿದ ಕೂಡಲೇ ಅವನಿಗೆ ಪರಮಾಶ್ಚರ್ಯ..!! ಅದಕ್ಕೆ ಆ ಹೋಟೆಲ್ ಮಾಣಿಯನ್ನು ಕುರಿತು 'ನಾನು ನಿಮ್ಮ ರೀತಿಯಲ್ಲೇ ಇಂಗ್ಲಿಷ್ ಮಾತಾಡ್ತಿದ್ದೆ, ನಿಮ್ಮ ರೀತಿಯಲ್ಲೇ ಬಟ್ಟೆಗಳನ್ನ ಹಾಕ್ತಿದ್ದೆ, ನಿಮ್ಮ ರೀತಿಗಳಲ್ಲೇ ನನ್ನ ಆಹಾರವನ್ನ ತೆಗೆದುಕೊಳ್ಳುತ್ತಿದ್ದೆ. ಹಾಗಿದ್ದಾಗ್ಲು ಹೇಗೆ ನನ್ನನ್ನ ಗುರುತು ಹಿಡಿದೆ?' ಅಂತ ಕುತೂಹಲದಿಂದ ಕೇಳ್ತಾನೆ. ಅದಕ್ಕೆ ಮಾಣಿ 'ಆ ದಿನ ನೀವು ಹೊಡೆದ ಸೀಟಿ ನಮ್ಮ ದೇಶದವ ಹೊಡೆಯುವ ಸೀಟಿಗಿಂತ ಭಿನ್ನವಾಗಿತ್ತು. ಆಗಲೇ ನೀವು ನಮ್ಮ ದೇಶದವರಲ್ಲ ಎಂಬ ಖಾತರಿಯೊಂದಿಗೆ ಯುದ್ಧದ ಸಮಯದಲ್ಲಿ ನೀವು ನಮ್ಮ ದೇಶದಲ್ಲಿರುವ ಬಗ್ಗೆ ಅನುಮಾನದಿಂದ ಪೊಲೀಸರಿಗೆ ದೂರು ಕೊಟ್ಟೆ.' ಅಂತ ಉತ್ತರಿಸಿದ.

ಅಂದರೆ ಸರ್ವ ಸಾಮಾನ್ಯ ಮನುಷ್ಯನ ದೇಶಭಕ್ತಿಯ ಮತ್ತ ಆ ದೇಶದಲ್ಲಿ ಜಾಸ್ತಿಯಿರುವುದರಿಂದ ಇದು ಸಾಧ್ಯವಾಯಿತು.

ಒಂದು ಸಂಘಟಿತ ಸ್ವರೂಪ, ಒಂದು ಏಕ ಸೂತ್ರತೆಯನ್ನ ಆ ದೇಶದಲ್ಲಿ ಕಾಣ್ತೇವೆ. ಹಾಗಾಗಿ ಅವರು ನಮ್ಮ ದೇಶವನ್ನು ಆಳಿದರು. ಸಂಖ್ಯೆಯಲ್ಲಿ ನಾವು ಅವರಿಗಿಂತ ಜಾಸ್ತಿ ಆದರೆ ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟ ಯಾವ ಮಟ್ಟದಲ್ಲಿದೆ ಎಂದರೆ ಆ ರೀತಿಯಾಗಿಲ್ಲ. ರಾಬರ್ಟ್ ಕ್ಲೈವ್ ಬಂಗಾಳವನ್ನು ಗೆದ್ದಾಗ ಅವನು 'ನಾನು ಬಂಗಾಳದ ರಾಜ' ಅಂತ ಹೇಳಲಿಲ್ಲ ಅವನು. 'ನಾನು ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿಯಾಗಿ ಇಲ್ಲಿದೀನಿ' ಅಂತ ಹೇಳಿಕೊಂಡ. ಆದರೆ ನಮ್ಮ ದೇಶದ ಜನರಾದ ನಾವು ಇವತ್ತಿಗೂ ಅಷ್ಟೇ, ಅವತ್ತಿಗೂ ಅಷ್ಟೇ. ಒಂದು ಸಣ್ಣ ಜಾಗ ಸಿಕ್ಕಿದರೂ 'ನನ್ನದು' ಎಂಬ ಅಹಂನಿಂದ ಹೇಳ್ಕೊತೀವಿ. ನಾನು ಇಷ್ಟು ದೊಡ್ಡ 'ಹಿಂದೂಸಮಾಜದ ಪ್ರತಿನಿಧಿ' ಅಂತ ಯೋಚನೆ ಮಾಡೋದಿಲ್ಲ, ಈ ದೇಶದ ಒಬ್ಬ ಪ್ರಜೆ ಅಂತ ಯೋಚನೆ ಮಾಡೋದಿಲ್ಲ. ಆ ಕೆಲಸವನ್ನೇ ಡಾಕ್ಟರ್ ಜಿ ಮಾಡಿದ್ದು. ಡಾಕ್ಟರ್ ಜಿ ಸಣ್ಣ ಸಣ್ಣ ಸಂಗತಿಗಳ ಮುಖಾಂತರ ನಮಗೆ ಇದನ್ನ ಕಲಿಸಿದರು.

ಸಾಮಾನ್ಯವಾಗಿ ವ್ಯಕ್ತಿಗು ಹಾಗು ಕುಟುಂಬದ ಸ್ವಾರ್ಥಕ್ಕು ಏನಾದ್ರು ಸಮಸ್ಯೆ ಬಂದ್ರೆ, ಪ್ರತಿಯೊಂದು ಸಂದರ್ಭದಲ್ಲೂ ಸಾಮಾನ್ಯ ವ್ಯಕ್ತಿ ತನ್ನ ಸ್ವಾರ್ಥವನ್ನೇ ಹಿಡಿಯುತ್ತಾನೆ. ಕುಟುಂಬದ ಹಿತಕ್ಕೂ , ಊರಿನ ಹಿತಕ್ಕೂ ಏನಾದರೂ ತಾಕಲಾಟ ಬಂದ್ರೆ, ತನ್ನ ಕುಟುಂಬದ ಹಿತವನ್ನು ಹಿಡಿಯುತ್ತಾನೆ. ಆದರೆ ಸಂಘ ಇದನ್ನ ಉಲ್ಟಾ ಮಾಡುವಂತಹ ಪ್ರಯತ್ನ ಮಾಡುತ್ತೆ. ತನಗಿಂತ ಕುಟುಂಬ ದೊಡ್ಡದು, ತನಗಿಂತ ಸಮಾಜ ದೊಡ್ಡದು, ತನಗಿಂತ ದೇಶ ದೊಡ್ಡದು ಅನ್ನೋದನ್ನ ಕಲಿಸೋ ಪ್ರಯತ್ನ ಸಂಘದ್ದು. ಹಾಗಾಗಿ ನಮ್ಮ ನಿಷ್ಠೆ ವ್ಯಕ್ತಿಗಲ್ಲ, ಸಂಘಟನೆಗೆ. ನಮ್ಮ ನಿಷ್ಠೆ ಸಂಘಟನೆಗಲ್ಲ ದೇಶಕ್ಕೆ, ದೇಶನಿಷ್ಠೆ ಮತ್ತು ಸಂಘನಿಷ್ಠೆ ಗಳ ನಡುವೆ ಪ್ರಶ್ನೆ ಬಂದು ದೇಶದ ನಿಷ್ಠೆಗೆ ತೊಂದರೆ ಆಗೋದಾದ್ರೆ ಆಗ ಸಂಘನಿಷ್ಠೆಯನ್ನು ಬಿಡಬೇಕಾಗುತ್ತೆ. ಹಾಗಾಗಿ ಡಾಕ್ಟರ್ ಜಿ ಸಣ್ಣ ಸಣ್ಣ ಸಂಗತಿಗಳ ಮುಖಾಂತರ ಇದನ್ನ ಕಲಿಸ್ತಿದ್ರು.




(ಸಶೇಷ: ಮುಂದಿನ ಭಾಗದೊಂದಿಗೆ ಮುಕ್ತಾಯ )



ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೨

No comments:

Post a Comment