Nov 9, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೨

ಸಂಘ ಅನ್ನೋದಕ್ಕಿಂತ ಸಂಘ ಮಾಡುವಂತಹ ಕೆಲಸಕ್ಕೆ ವಿಜಯ ನಿಶ್ಚಿತ. ಸಂಘದ ವಿಚಾರ ಇದ್ದಾಗ ಮಾತ್ರ ಪ್ರಪಂಚ ಉಳಿಯೋದಕ್ಕೆ ಸಾಧ್ಯ, ಎಂಬ ನಂಬಿಕೆ ಯೊಂದಿಗೆ ನಾವು ಸಂಘದ ಕೆಲಸವನ್ನ ಮಾಡ್ಬೇಕು.

ಮಾನನೀಯ ದತ್ತೊಪಂತ್ ತೇಂಗಡಿಜಿಯವರು ಸಂಸತ್ ಸದಸ್ಯರಾಗಿದ್ರು. ಹೀಗೆ ಸದಸ್ಯರ ಜೊತೆ ಮಾತಾಡುತ್ತಿದ್ರು. ಎಲ್ಲ ಪಕ್ಷದವರು ಇದ್ರೂ. ಯಾರೋ ಒಬ್ಬರು 'ಯಾರು ಅದು ಆರ್ಎಸ್ಸೆಸ್ ಶುರು ಮಾಡಿದ್ದು?' ಅಂತ ಹೇಳಿದ್ದಕ್ಕೆ ಇನ್ನೊಬ್ಬರು 'ಆರೆಸ್ಸಸ್ ಶುರು ಮಾಡಿದ್ದು ಯಾರು ಅಂತ ಗೊತ್ತಿಲ್ವಾ?' ಅಂದಾಗ ಮಾನನೀಯ ದತ್ತೊಪಂಥರು 'ಗೊತ್ತಿಲ್ದೆ ಇರೋದು ಸರಿ ಇದೆ ' ಅಂತ ಸಮಾಧಾನ ಮಾಡಿದರು. ಡಾಕ್ಟರ್ ಜಿಯವರ ನೆರಳು ಡಾಕ್ಟರ್ ಜಿಯವರಿಗಿಂತ ದೊಡ್ಡದಿದೆ. ಡಾಕ್ಟರ್ ಜಿ ಯಾವಾಗಲು ತಮ್ಮನ್ನ ಸಂಘಟನೆಗಿಂತ ದೊಡ್ಡವರನ್ನಾಗಿ ಮಾಡಿಕೊಳ್ಳಲೇ ಇಲ್ಲ. ಹಾಗಾಗಿ ಜಗತ್ತಿನಲ್ಲಿ ಡಾಕ್ಟರ್ ಜಿ ಯವರು ಗೊತ್ತಿಲ್ಲದಿರುವವರು ಸಾಕಷ್ಟು ಜನ ಇದ್ದಾರೆ ಆದರೆ ಆರೆಸ್ಸಸ್ ಗೊತ್ತಿಲ್ಲದಿರುವವರು ತುಂಬಾ ಕಡಿಮೆ. ಬರೆ ಡಾಕ್ಟರ್ ಜಿ ಅಂತಲ್ಲ, ಸಂಘದ ಸಾಕಷ್ಟು ಹಿರಿಯರು ಸಹ ಸಂಘದ ಪದ್ದತಿಯ ಕಾರಣಕ್ಕೆ ತಾವು ಸಾಕಷ್ಟು ದೊಡ್ಡ ವ್ಯಕ್ತಿಗಳಾದರೂ ಹೊರಗಡೆ ಪ್ರಪಂಚಕ್ಕೆ ಸಾಧಾರಣ ವ್ಯಕ್ತಿಗಳಾಗಿಯೇ ಇರ್ತಾರೆ.

ಮಾನನೀಯ ದತ್ತೊಪಂತ್ ತೇಂಗಡಿಜಿಯವರು ನಿಧನರಾದಾಗ ಪತ್ರಿಕೆಯ ಮೂಲೆಯಲ್ಲಿ 'ಭಾರತಿಯ ಮಜ್ದೂರ್ ಸಂಘದ ಸಂಸ್ಥಾಪಕ ದತ್ತೊಪಂತ್ ತೇಂಗಡಿಯವರು ನಿಧನರಾದರು' ಅಂತ ಬಂದಿತ್ತು. ವಾಜಪೇಯಿ, ಆಡ್ವಾಣಿ ಅಂಥವರನ್ನು ನಿರ್ಮಾಣ ಮಾಡಿದಂತಹ ತೇಂಗಡಿಜಿಯವರು ಎಷ್ಟು ದೊಡ್ಡ ವ್ಯಕ್ತಿಗಳೆಂದು ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು. ಆದರೆ ಹೊರಗಡೆ ಪ್ರಪಂಚಕ್ಕೆ ಅವರು ಸಾಧಾರಣ ವ್ಯಕ್ತಿಯಾಗಿಯೇ ಉಳಿದರು.

ನಿಧನರಾದ ಹೋ.ವೆ.ಶೇಷಾದ್ರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆ ಯಿತು. ಕಾರ್ಯಕ್ರಮಕ್ಕೆ ಆಡ್ವಾಣಿ, ವಾಜಪೇಯಿ ಯವರೆಲ್ಲ ಬಂದಿದ್ದರು. ನೆರೆದಿದ್ದ ಪತ್ರಕರ್ತರಿಗೆ ಸಿಕ್ಕಾಪಟ್ಟೆ ಆಶ್ಚರ್ಯ..! ಯಾರೋ ಶೇಷಾದ್ರಿ ಅನ್ನೋವ್ರು ಹೋಗಿದ್ದಕ್ಕೆ ಆಡ್ವಾಣಿ, ವಾಜಪೇಯಿ ಯವರೆಲ್ಲ ಯಾಕೆ ಬಂದಿದ್ದಾರೆ..!? ಅಂತ.

ಹೀಗೆ ಸಂಘದ ವಿಶೇಷ ಅಂದ್ರೆ ತನ್ನನ್ನ ತಾನು ದೊಡ್ಡವನನ್ನಾಗಿ ಮಾಡಿಕೊಳ್ಳದೆ ಇರೋದು.

ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟವನ್ನ ಜಾಸ್ತಿ ಮಾಡಿದಾಗ ಈ ದೇಶ ಉಳಿಯತ್ತೆ ಅನ್ನೋದು ನಮ್ಮ ವಿಚಾರ. ಸಂಘದ ಪ್ರಾರ್ಥನೆಯಲ್ಲೂ ನಾವು ಅದನ್ನೇ ಹೇಳ್ತೇವೆ. ಧರ್ಮದ ಆಧಾರದ ಮೇಲೆ ಈ ದೇಶದ ಸಮಾಜವನ್ನ ಸಂಘಟನೆ ಮಾಡಿ ಧರ್ಮ ರಕ್ಷಣೆ ಮಾಡೋ ಮುಖಾಂತರ ಈ ದೇಶವನ್ನ ಪರಮ ವೈಭವವನ್ನಾಗಿ ಮಾಡ್ತೇವೆ ಅಂತ.ನಾವು ಸಾಮಾನ್ಯವಾಗಿ ಮಾತಾಡ್ತಿರ್ತೇವೆ, 'ಯತೋ ಧರ್ಮಃ ತತೋ ಜಯಃ' ಅಂತ. ಆದರೆ ಅದರ ಪ್ರತ್ಯಕ್ಷ ಅನುಭವ ನಮಗೆ ಕಷ್ಟ.

ಇತ್ತೀಚಿಗೆ ಕೆ.ಎಸ.ಲಾಲ್ ಎಂಬುವರು 'ಇಂಡಿಯನ್ ಮುಸ್ಲಿಂ ಸ್ ಹೂ ಆರ್ ದೆ ?' ಅನ್ನೋ ಪುಸ್ತಕ ಬರೆದಿದ್ದಾರೆ. ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೇಗೆ ಜಾಸ್ತಿಯಾಯ್ತು ಅನ್ನೋದನ್ನ ಅದರಲ್ಲಿ ಅವರು ಹೇಳಿದಾರೆ. ಮತಾಂತರ, ಹಿಂದೂ ಹೆಣ್ಣುಮಕ್ಕಳನ್ನು ಮ ದುವೆಯಾಗುವುದು, ಹೆಚ್ಚಿಗೆ ಹೆಣ್ಣುಮಕ್ಕಳನ್ನು ಮದುವೆ ಯಾಗುವುದು, ಯುದ್ಧಗಳಲ್ಲಿ ಹಿಂದೂ ಸೈನಿಕರನ್ನೇ ಮುಂದೆ ನಿಲ್ಲಿಸಿ ಯುದ್ಧ ಮಾಡುವುದು ಈ ಎಲ್ಲ ರೀತಿಗಳಿಂದ ಮುಸ್ಲಿಮರು ತಮ್ಮ ಸಂಖ್ಯೆಯನ್ನ ಹೆಚ್ಚಿಸಿಕೊಂಡರು ಅನ್ನೋದನ್ನ ಅವರು ಉಲ್ಲೇಖ ಮಾಡಿದಾರೆ.

ಅವತ್ತಿನ ಕಾಲದಲ್ಲಿ ಸಾಕಷ್ಟು ದೇವಸ್ಥಾನಗಳು ಇದ್ದವು, ಧರ್ಮದ ಬಗ್ಗೆ ಪ್ರವಚನ ಮಾಡುವವರಿದ್ದರು. ಹೀಗಿದ್ದೂ ಎಲ್ಲ ಕಡೆ ಹೊಡೆತ ಬಿತ್ತು. ಆಶ್ಚರ್ಯದ ವಿಷಯ ಅಂದರೆ, ಸಿಂಧ್ ಪ್ರಾಂತ್ಯ ದಿಂದ ಮುಸಲ್ಮಾನರ ಆಕ್ರಮಣ ಆಯ್ತು. ಬಂಗಾಳ, ಅಂದರೆ ಈಗಿನ ಬಾಂಗ್ಲಾದೇಶ, ಇರೋದು ಸಿಂಧ್ ಪ್ರಾಂತ್ಯದಿಂದ ಸಾವಿರಾರು ಮೈಲುಗಳ ದೂರ. ಆದರೂ ಅಲ್ಲಿ ಮತಾಂತರ ಮಾಡಿದ್ರು. ಅದರ ಪ್ರಮಾಣ ಎಷ್ಟು ಅಂದ್ರೆ ನಿಶ್ಚಿತ ಸಮಯದಲ್ಲಿ ಕಪ್ಪ ಕೊಡದಿದ್ದಾಗ ತನ್ನ ಕುಟುಂಬ ಸಮೇತ ಅವನು ಇಸ್ಲಾಂಗೆ ಮತಾಂತರವಾಗಬೇಕಾಗಿತ್ತು. ಒಬ್ಬ ರಾಜ ಕಪ್ಪ ಕೊಡಕ್ಕೆ ಹೋಗ್ತಾನೆ. ಅವನ ಪಕ್ಕದ ರಾಜ್ಯದ ಒಬ್ಬ ರಾಜ ಬಂದಿರೋದಿಲ್ಲ. ಅವನು ಸ್ವಲ್ಪ ದೊಡ್ಡ ರಾಜ. ಅವನು ಮತಾಂತರನಾದರೆ ಕಷ್ಟ ಅಂತ ಅವನ ಕಪ್ಪವನ್ನು ಇವನೇ ಕೊಟ್ಟು ಇಸ್ಲಾಂಗೆ ಮತಾಂತರವಾಗುತ್ತಿದ್ದ.

ಮೊಹಮ್ಮದ್ ಕುಲಿಖಾನ್ ಒಬ್ಬ ಬ್ರಾಹ್ಮಣನಾಗಿದ್ದವ, ಜಲಾಲುದ್ದೀನ್ , ಅವರು ಇವತ್ತಿನ ಬಾಂಗ್ಲಾದೇಶವನ್ನ ನಿರ್ಮಾಣ ಮಾಡಕ್ಕೆ ಕಾರಣರಾದರು. ಅಂದರೆ ಅಂದಿಗೂ, ಇಂದಿಗೂ ನಾವು ಏನನ್ನ ಅಂದುಕೊತೀವಿ ಎಲ್ಲಿ ಧರ್ಮವಿರುತ್ತೋ ಅಲ್ಲಿ ವಿಜಯ ಅಂತ ಅದರ ಪ್ರತ್ಯಕ್ಷ ಅನುಭವ ನಮಗಿಲ್ಲ. ಅಂದರೆ ನಮ್ಮ ಕಲ್ಪನೆಯಲ್ಲಿ ನಾವು ಯಾವುದನ್ನ ಧರ್ಮ ಅಂತ ನಂಬಿದ್ದೇವೋ ಆ ಧರ್ಮ ಇದ್ದಾಗಲೂ ನಾವು ಸೋತಿದೇವೆ. ಹಾಗಾದರೆ ನಿಜವಾದ ಧರ್ಮ ಅಂದರೆ ಯಾವುದು ಅಂತಲಾದರೂ ಗೊತ್ತಾಗಬೇಕು ಅಥವಾ ಯತೋ ಧರ್ಮಃ ತತೋ ಜಯಃ ಅನ್ನೋದು ಗೆಲುವಲ್ಲ ಅನ್ನೋದಾದ್ರೂ ಗೊತ್ತಾಗಬೇಕು.

ಹೀಗಾಗಿ ಸಂಘಧರ್ಮ ಉಳಿದಾಗ ವ್ಯಕ್ತಿಗತವಾದಂತಹ ನಮ್ಮ ಎಲ್ಲ ಸಂಗತಿಗಳೂ ಉಳಿಯೋದಕ್ಕೆ ಸಾಧ್ಯ. ಆ ಸಂಘಧರ್ಮವನ್ನ ಪಾಲನೆ ಮಾಡುವಂತಹ ವ್ಯವಸ್ಥೆಯನ್ನ ಡಾಕ್ಟರ ಜಿ ನಿರ್ಮಾಣ ಮಾಡಿದ್ರು. ಅಂದರೆ ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟವನ್ನ ಜಾಸ್ತಿ ಮಾಡಿದ್ರು.


(ಸಶೇಷ)

No comments:

Post a Comment