Nov 4, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೧

ಮತ್ತೂರು ವಿಜಯದಶಮಿ ಉತ್ಸವ
ತಾರೀಖು: ಅಕ್ಟೋಬರ್ ೬, ೨೦೧೧, ಗುರುವಾರ
ಬೌದ್ಧಿಕ್: ಶ್ರೀಯುತ ರಾಜಾರಾಮ್, ಮತ್ತೂರು

ವಿಜಯದಶಮಿ ಹಿಂದೂ ಸಮಾಜದ ಒಂದು ಉತ್ಸವ. ಸಂಘ ಯಾವುದೇ ಉತ್ಸವಗಳನ್ನ ಅಷ್ಟೇ ಅಲ್ಲ ಯಾವುದನ್ನು ಹೊಸದಾಗಿ ಪ್ರಾರಂಭ ಮಾಡಿಲ್ಲ. ಸಂಘದ ವಿಶೇಷವೇ ಸಂಘ ಪ್ರಾರಂಭ ಆದಂತಹ ದಿನ.

ಸಂಘದ ಕೆಲಸವನ್ನ ಎಷ್ಟೋ ಉತ್ಸಾಹದಿಂದ ಮಾಡಿದ ಎಷ್ಟೋ ದಿನಗಳ ನಂತರ ನಮಗೆ ಸಹಜವಾಗಿ ಅನ್ಸುತ್ತೆ, ಎಷ್ಟು ದಿನದವರೆಗೆ ಸಂಘದ ಕೆಲಸವನ್ನ ಮಾಡೋದು, ಯಾವುದು ಇದಕ್ಕೆ ಗುರಿ, ಯಾವುದು ಕೊನೆ ಅಂತ ಅನ್ನಿಸೋದಕ್ಕೆ ಶುರು ಆಗುತ್ತೆ. ಯಾಕೆ ಅಂದರೆ ಸಾಮಾನ್ಯವಾಗಿ ಮನುಷ್ಯನಿಗೆ ಇಷ್ಟು ದಿನದ ಕೆಲಸ ಅಂತ ನಿಗದಿಯಾಗಿರೋ ಕೆಲಸವನ್ನ ಮಾಡೋದು ಸುಲಭ. ಆದರೆ ನಿರಂತರವಾಗಿ ಮಾಡುವ ಕೆಲಸ ಕಷ್ಟ. ವರ್ಷದ ಅಷ್ಟು ದಿನವೂ ನಿತ್ಯ ಒಂದರಂತೆ ಸೂರ್ಯನಮಸ್ಕಾರ ಮಾಡೋದು ಕಷ್ಟ. ಆದರೆ ೧ ತಿಂಗಳ ಅವಧಿಯಲ್ಲಿ ೫೦೦ ಸೂರ್ಯನಮಸ್ಕಾರ ಮಾಡೋದು ಸುಲಭ.

ಸಂಘದ ಕೆಲಸವೂ ನಿರಂತರವಾಗಿ ಮಾಡ್ತಕ್ಕಂತಹ ಕೆಲಸ. ಇದಕ್ಕೆ ಗೆಲುವು ಸಿಗುತ್ತಾ? ಅಂತ ಮನುಷ್ಯ ಸಹಜವಾಗಿ ಯೋಚಿಸ್ತಾನೆ. ಯಾಕೆಂದ್ರೆ ಮನುಷ್ಯನಿಗೆ ತಕ್ಷಣ ಫಲ ಸಿಗಬೇಕು ಅಂತ ಯೋಚಿಸ್ತಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಸಂಘಚಾಲಕರ ವರ್ಗ ನಡೆಯಿತು. ವರ್ಗದಲ್ಲಿ ಪರಮ ಪೂಜನೀಯ ಸರಸಂಘಚಾಲಕರ ಅವಧಿಯಲ್ಲಿ ಅವರೊಂದು ಕಥೆ ಹೇಳಿದರು.

ಮುಸಲ್ಮಾನರ ಆಡಳಿತ ಕಾಲದಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಮುಸ್ಲಿಂ ಇನ್ನೊಬ್ಬ ಹಿಂದೂ. ಒಮ್ಮೆ ಆ ಮುಸಲ್ಮಾನನಿಗೆ ೧೦೦ ರುಪಾಯಿ ಬೇಕಾಗುತ್ತೆ. ಸ್ನೇಹಿತನ ಮನೆಗೆ ಕೇಳಕ್ಕೆ ಬರ್ತಾನೆ, ಆದರೆ ಅವನು ಕೃಷಿಕ, ಗದ್ದೆಗೆ ಹೋಗಿರ್ತಾನೆ. ಅವನ ಮಡದಿಗೆ 'ನಾನಿಲ್ಲೇ ಮಸೀದಿಯಲ್ಲಿ ಇರ್ತೇನೆ, ಬಂದ ಕೂಡಲೇ ಹೇಳಿ ಕಳಿಸಿ' ಅಂತ ಹೇಳಿ ಮಸೀದಿಗೆ ಹೋಗ್ತಾನೆ. ಸ್ನೇಹಿತ ಬಂದೊಡನೆಯೇ ಮಸೀದಿಗೆ ಹೋಗ್ತಾನೆ ಅಲ್ಲಿ ಒಬ್ಬ ಮೌಲ್ವಿಯ ಪ್ರವಚನ ಆಗ್ತಿರುತ್ತೆ. ಇವನು ಪ್ರವಚನವನ್ನ ಪೂರ್ಣ ಕೇಳಿ ನಂತರ ಸ್ನೇಹಿತನಿಗೆ 'ಪ್ರವಚನ ತುಂಬಾ ಚೆನ್ನಾಗಿತ್ತು, ಅವರನ್ನು ಪರಿಚಯ ಮಾಡಿಸು' ಅಂತ ಕೇಳ್ತಾನೆ.

ಪರಿಚಯ ಮಾಡಿಸಿದ ನಂತರ, ಮೌಲ್ವಿಯನ್ನ ಕುರಿತು ಹಿಂದೂ ಸ್ನೇಹಿತ 'ನಿಮ್ಮ ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಒಂದು ವಿಷಯ ನನಗೆ ಹಿಡಿಸಲಿಲ್ಲ' ಹೇಳಿದಾಗ ಅದಕ್ಕೆ ಮೌಲ್ವಿ ಆಶ್ಚರ್ಯದಿಂದ 'ಯಾವ ವಿಷಯ?' ಅಂತ ಕೇಳ್ತಾರೆ. ಅದಕ್ಕೆ ಹಿಂದೂ ಸ್ನೇಹಿತ 'ದೇವರ ದೇವತ್ವ ಅನ್ನೋದು ಯಾರಿಗೂ ಅರ್ಥ ವಾಗದ ವಿಷಯ ಅಂತ ಹೇಳಿದ್ರಲ್ಲ ಆದರೆ ನನಗೆ ಗೊತ್ತಾಗುತ್ತೆ, ಬೇಕಾದ್ರೆ ತೋರಿಸ್ತೀನಿ, ಆದರೆ ಒಂದು ಷರತ್ತು' ಅಂತ ಹೇಳಿದಾಗ ಅಲ್ಲಿದ್ದವರಿಗೆಲ್ಲ ಆಶ್ಚರ್ಯ..! ಮೌಲ್ವಿಗೆ ಗೊತ್ತಾಗದೆ ಇರೋ ವಿಷಯ ಅವನಿಗೆ ಹೇಗೆ ಗೊತ್ತಾಗುತ್ತೆ ಅಂತ ! 'ವಿಷಯ ಸಮರ್ಥನೆಯ ನಂತರ ನಂಗೆ ೨೦೦ ರುಪಾಯಿಯನ್ನು ಕೊಡಬೇಕು' ಎಂಬ ಶರತ್ತನ್ನು ಮುಂದಿಟ್ಟು ಎಲ್ಲರನ್ನು ನದಿಯ ದಂಡೆಯ ಬಳಿಗೆ ಕರೆದುಕೊಂಡು ಹೋಗ್ತಾನೆ.

ನದಿಯ ನೀರನ್ನು ತೋರಿಸುತ್ತ 'ಇದೇ ದೇವರ ದೇವತ್ವ' ಅಂತ ತೋರಿಸುತ್ತ 'ಈ ನೀರು ಎಲ್ಲಿಂದ ಬಂತು, ಹೇಗೆ ಬಂತು' ಅಂತ ಹೇಳಿದಾಗ ಎಲ್ಲ ಒಪ್ಪಿಕೊಂಡರು, ೨೦೦ ರುಪಾಯಿಯನ್ನು ಕೊಟ್ರು. ೧೦೦ ರುಪಾಯನ್ನು ಮುಸ್ಲಿಂ ಸ್ನೇಹಿತನಿಗೆ ಕೊಟ್ಟು, ತಾನು ೧೦೦ ರುಪಾಯನ್ನು ಇಟ್ಕೊಂಡ.

ಇದೇ ರೀತಿ ಇನ್ನೊಮ್ಮೆ ಮುಸ್ಲಿಮ ಸ್ನೇಹಿತನಿಗೆ ೨೦೦ ರುಪಾಯಿ ಬೇಕಾಗುತ್ತೆ, ಹಿಂದೂ ಸ್ನೇಹಿತ ಮಸೀದಿಗೆ ಹೋಗ್ತಾನೆ, ಪ್ರವಚನ ಆಗುತ್ತೆ, ಯಥಾ ಪ್ರಕಾರ ಪ್ರವಚನ ಮಾಡಿದ ಮೌಲ್ವಿಯನ್ನ ಕುರಿತು 'ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಇನ್ನೊಬ್ಬರ ಮನಸ್ಸಿನಲ್ಲಿ ಇರೋ ವಿಷಯ ವನ್ನ ಹೇಳೋದಿಕ್ಕಾಗಲ್ಲ ಅನ್ನೋದು ವಿಷಯ ಹಿಡಿಸಲಿಲ್ಲ. ಯಾಕೆಂದ್ರ ನಾನ್ ಹೇಳ್ತೀನಿ ಅಂದ, ಆದ್ರೆ ೪೦೦ ರುಪಾಯಿ ಷರತ್ತು ' ಅಂದ, ಎಲ್ಲ ಒಪ್ಕೊಂದ್ರು. ಹೇಗೆ ಅಂತ ಕೇಳಿದಾಗ 'ಈಗ ನಾನು ನಿಮ್ಮ ಮನಸ್ಸಿನಲ್ಲಿ ಇರೋ ವಿಷಯ ಹೇಳ್ತೀನಿ.' ಎಲ್ಲ ಆಯ್ತು ಅಂದ್ರು. 'ಇಡೀ ಪ್ರಪಂಚದಲ್ಲಿ ಇಸ್ಲಾಂ ಧರ್ಮ ಒಂದೇ ಶ್ರೇಷ್ಠ . ಜಗತ್ತಿನ ಎಲ್ಲರನ್ನು ಇಸ್ಲಾಂನ ಅನುಯಾಯಿಗಳಾಗಿ ಮಾಡ್ಬೇಕು' ಎಂದು ಯಾವುದೇ ಕಾರಣಕ್ಕೂ ಅವನು ತಿರಸ್ಕಾರ ಮಾಡಬಾರದು ಅನ್ನೋ ರೀತಿಯಲ್ಲಿ ಹೇಳಿದ. ಮೌಲ್ವಿ ಸರಿ ಅಂತ ಒಪ್ಕೊಂಡು ೪೦೦ ರುಪಾಯಿಯನ್ನು ಕೊಟ್ಟ, ಯಥಾ ಪ್ರಕಾರ ೨೦೦ ರುಪಾಯಿ ಸ್ನೇಹಿತನಿಗೆ, ೨೦೦ ತನಗೆ.

ಮತ್ತೊಮ್ಮೆ ಮುಸ್ಲಿಮ ಸ್ನೇಹಿತನಿಗೆ ೧೦೦೦ ರುಪಾಯಿ ಬೇಕಾಗುತ್ತೆ, ಕೊಡಲು ಮಸೀದಿಗೆ ಹೋಗ್ತಾನೆ, ಯಥಾ ಪ್ರಕಾರ ಪ್ರವಚನ ಮಾಡಿದ ಮೌಲ್ವಿಯನ್ನ ಕುರಿತು 'ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಪ್ರಳಯ ಆಗುತ್ತೆ ಅನ್ನೋದು ಸುಳ್ಳು. ಪ್ರಳಯ ಖಂಡಿತ ಆಗಲ್ಲ. ಈ ಸಲ ೨೦೦೦ ರುಪಾಯಿ ಷರತ್ತು ' ಅಂದ, ಎಲ್ಲ ಒಪ್ಪಿಕೊಂಡರು. ೨೦೦೦ ರುಪಾಯಿ ಕೊಟ್ರು. ಆದರೆ ಅವನ ಮುಸ್ಲಿಂ ಸ್ನೇಹಿತ ಹೇಗೆ ನಿರೂಪಿಸ್ತೀಯ ಅಂತ ಕೇಳಿದಾಗ 'ಅಲ್ಲ ಕಣಯ್ಯಾ, ಪ್ರಳಯ ಆಗದೆ ಇದ್ರೆ ಏನು ತೊಂದ್ರೆ ಇಲ್ಲ. ಅಕಸ್ಮಾತ್ ಪ್ರಳಯ ಆದ್ರೆ ಕೊಡೋಕ್ಕೆ ನಾನೂ ಇರೋಲ್ಲ, ತೊಗೊಳಕ್ಕೆ ಅವರು ಇರೋಲ್ಲ ಅಂದ'.

ಸಂಘದ ಕೆಲಸಕ್ಕೆ ವಿಜಯ ಅನ್ನೋದು ಶತಃಸಿದ್ದ. ಅಕಸ್ಮಾತ್ ವಿಜಯ ಸಿಗದೇ ಇದ್ದಲ್ಲಿ ಜಗತ್ತೇ ಇರೋಲ್ಲ ಎನ್ನುವ ನಂಬಿಕೆ ಸ್ವಯಂಸೇವಕರದ್ದಾಗಿರಬೇಕು ಅನ್ನೋ ವಿಷಯವನ್ನ ಸರಸಂಘಚಾಲಕರು ಹೇಳಿದ್ರು.

(ಸಶೇಷ)

No comments:

Post a Comment