Nov 24, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೩

ನಮ್ಮ ದೇಶದಲ್ಲಿ ಬಹಳಷ್ಟು ಜನ ದೊಡ್ಡವರು ದೇಶಭಕ್ತರಿದ್ದರು. ಗಾಂಧೀಜಿ, ಸಾವರ್ಕರ್, ಸುಭಾಶ್ ಚಂದ್ರ ಬೋಸ್ ಮುಂತಾದವರು. ಈ ರೀತಿಯಾಗಿ ದೇಶಭಕ್ತರಾಗಿದ್ದಂತಹ ದೊಡ ವ್ಯಕ್ತಿಗಳು ಇಂಗ್ಲೆಂಡ್ ನಲ್ಲಿ ಬಹಳ ಕಡಿಮೆ ಜನರಿದ್ದರು. ಆದರೆ ಬ್ರಿಟಿಷರು ನಮ್ಮನ್ನ ಆಳಿದರು, ನಾವು ಸೋತೆವು. ೧೫ ಇಂಗ್ಲೆಡ್ ಅನ್ನು ನಮ್ಮ ದೇಶದಲ್ಲಿ ಇಡಬಹುದು. ಆದರೂ ನಾವು ಸೋತೆವು. ಅಂದರೆ ನಾವು ಎಷ್ಟೇ ಸಮರ್ಥರಾಗಿದ್ದರೂ ನಾವು ನಮಗಿಂತ ಅಸಮರ್ಥರಾದವರ ಮುಂದೆ ಸೋತಿದ್ದೇವೆ. ಯಾಕೆ ನಾವು ಸೋತ್ವಿ?

ಎರಡನೇ ಮಹಾಯುದ್ಧದ ಸಮಯದಲ್ಲಿ ಜರ್ಮನಿಯವರು ಇಂಗ್ಲೆಂಡ್ ಮೇಲೆ ಪ್ರತಿನಿತ್ಯ ಬಾಂಬುಗಳನ್ನು ಹಾಕ್ತಾಯಿರ್ತಾರೆ. ಒಂದು ದಿನ ಇಂಗ್ಲೆಂಡಿನ ಪೋಲೀಸಿನವರು ಒಬ್ಬನನ್ನ ಬಂಧಿಸ್ತಾರೆ. ಅವನು ಜರ್ಮನಿಯ ಸಿಐಡಿ ಅಂತ ಹೇಳಿ ಅರೆಸ್ಟ್ ಮಾಡ್ತಾರೆ. ಅವನು ಪ್ರತಿನಿತ್ಯ ಇಂಗ್ಲೆಂಡಿನ ರಹಸ್ಯಗಳನ್ನ ಜರ್ಮನಿಗೆ ತಿಳಿಸ್ತಿರ್ತಾನೆ ಅಂತ. ವಿಚಾರಣೆ ಎಲ್ಲ ಆಗುತ್ತೆ. ಜರ್ಮನಿಯವನಿಗೆ ಕುತೂಹಲ ತಡೆಯಲಾರದೆ ಕೇಳ್ತಾನೆ 'ನನ್ನನ್ನ ಹೇಗೆ ಹಿಡಿದ್ರಿ? ಯಾವ ಡಿಪಾರ್ಟ್ ಮೆಂಟ್ ನನ್ನನ್ನ ಹಿಡಿದಿದ್ದು?, ಹೇಗೆ ನನ್ನ ಹಿಡಿದದ್ದು? ' ಅಂತ. ಅದಕ್ಕೆ ಪೋಲೀಸಿನವರು 'ಯಾವ ಡಿಪಾರ್ಟ್ ಮೆಂಟೂ ಅಲ್ಲ. ನೀನು ಪ್ರತಿ ದಿನ ತಿಂಡಿ ತಿನ್ನಲು ಹೋಗುತ್ತಿದ್ದ ಹೋಟೆಲಿನ ಮಾಣಿ ನಿನ್ನನ್ನ್ದು ಹಿಡಿದುಕೊಟ್ಟದ್ದು ಅಂತ!'.

ಅದನ್ನು ಕೇಳಿದ ಕೂಡಲೇ ಅವನಿಗೆ ಪರಮಾಶ್ಚರ್ಯ..!! ಅದಕ್ಕೆ ಆ ಹೋಟೆಲ್ ಮಾಣಿಯನ್ನು ಕುರಿತು 'ನಾನು ನಿಮ್ಮ ರೀತಿಯಲ್ಲೇ ಇಂಗ್ಲಿಷ್ ಮಾತಾಡ್ತಿದ್ದೆ, ನಿಮ್ಮ ರೀತಿಯಲ್ಲೇ ಬಟ್ಟೆಗಳನ್ನ ಹಾಕ್ತಿದ್ದೆ, ನಿಮ್ಮ ರೀತಿಗಳಲ್ಲೇ ನನ್ನ ಆಹಾರವನ್ನ ತೆಗೆದುಕೊಳ್ಳುತ್ತಿದ್ದೆ. ಹಾಗಿದ್ದಾಗ್ಲು ಹೇಗೆ ನನ್ನನ್ನ ಗುರುತು ಹಿಡಿದೆ?' ಅಂತ ಕುತೂಹಲದಿಂದ ಕೇಳ್ತಾನೆ. ಅದಕ್ಕೆ ಮಾಣಿ 'ಆ ದಿನ ನೀವು ಹೊಡೆದ ಸೀಟಿ ನಮ್ಮ ದೇಶದವ ಹೊಡೆಯುವ ಸೀಟಿಗಿಂತ ಭಿನ್ನವಾಗಿತ್ತು. ಆಗಲೇ ನೀವು ನಮ್ಮ ದೇಶದವರಲ್ಲ ಎಂಬ ಖಾತರಿಯೊಂದಿಗೆ ಯುದ್ಧದ ಸಮಯದಲ್ಲಿ ನೀವು ನಮ್ಮ ದೇಶದಲ್ಲಿರುವ ಬಗ್ಗೆ ಅನುಮಾನದಿಂದ ಪೊಲೀಸರಿಗೆ ದೂರು ಕೊಟ್ಟೆ.' ಅಂತ ಉತ್ತರಿಸಿದ.

ಅಂದರೆ ಸರ್ವ ಸಾಮಾನ್ಯ ಮನುಷ್ಯನ ದೇಶಭಕ್ತಿಯ ಮತ್ತ ಆ ದೇಶದಲ್ಲಿ ಜಾಸ್ತಿಯಿರುವುದರಿಂದ ಇದು ಸಾಧ್ಯವಾಯಿತು.

ಒಂದು ಸಂಘಟಿತ ಸ್ವರೂಪ, ಒಂದು ಏಕ ಸೂತ್ರತೆಯನ್ನ ಆ ದೇಶದಲ್ಲಿ ಕಾಣ್ತೇವೆ. ಹಾಗಾಗಿ ಅವರು ನಮ್ಮ ದೇಶವನ್ನು ಆಳಿದರು. ಸಂಖ್ಯೆಯಲ್ಲಿ ನಾವು ಅವರಿಗಿಂತ ಜಾಸ್ತಿ ಆದರೆ ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟ ಯಾವ ಮಟ್ಟದಲ್ಲಿದೆ ಎಂದರೆ ಆ ರೀತಿಯಾಗಿಲ್ಲ. ರಾಬರ್ಟ್ ಕ್ಲೈವ್ ಬಂಗಾಳವನ್ನು ಗೆದ್ದಾಗ ಅವನು 'ನಾನು ಬಂಗಾಳದ ರಾಜ' ಅಂತ ಹೇಳಲಿಲ್ಲ ಅವನು. 'ನಾನು ಬ್ರಿಟಿಷ್ ಸಾಮ್ರಾಜ್ಯದ ಪ್ರತಿನಿಧಿಯಾಗಿ ಇಲ್ಲಿದೀನಿ' ಅಂತ ಹೇಳಿಕೊಂಡ. ಆದರೆ ನಮ್ಮ ದೇಶದ ಜನರಾದ ನಾವು ಇವತ್ತಿಗೂ ಅಷ್ಟೇ, ಅವತ್ತಿಗೂ ಅಷ್ಟೇ. ಒಂದು ಸಣ್ಣ ಜಾಗ ಸಿಕ್ಕಿದರೂ 'ನನ್ನದು' ಎಂಬ ಅಹಂನಿಂದ ಹೇಳ್ಕೊತೀವಿ. ನಾನು ಇಷ್ಟು ದೊಡ್ಡ 'ಹಿಂದೂಸಮಾಜದ ಪ್ರತಿನಿಧಿ' ಅಂತ ಯೋಚನೆ ಮಾಡೋದಿಲ್ಲ, ಈ ದೇಶದ ಒಬ್ಬ ಪ್ರಜೆ ಅಂತ ಯೋಚನೆ ಮಾಡೋದಿಲ್ಲ. ಆ ಕೆಲಸವನ್ನೇ ಡಾಕ್ಟರ್ ಜಿ ಮಾಡಿದ್ದು. ಡಾಕ್ಟರ್ ಜಿ ಸಣ್ಣ ಸಣ್ಣ ಸಂಗತಿಗಳ ಮುಖಾಂತರ ನಮಗೆ ಇದನ್ನ ಕಲಿಸಿದರು.

ಸಾಮಾನ್ಯವಾಗಿ ವ್ಯಕ್ತಿಗು ಹಾಗು ಕುಟುಂಬದ ಸ್ವಾರ್ಥಕ್ಕು ಏನಾದ್ರು ಸಮಸ್ಯೆ ಬಂದ್ರೆ, ಪ್ರತಿಯೊಂದು ಸಂದರ್ಭದಲ್ಲೂ ಸಾಮಾನ್ಯ ವ್ಯಕ್ತಿ ತನ್ನ ಸ್ವಾರ್ಥವನ್ನೇ ಹಿಡಿಯುತ್ತಾನೆ. ಕುಟುಂಬದ ಹಿತಕ್ಕೂ , ಊರಿನ ಹಿತಕ್ಕೂ ಏನಾದರೂ ತಾಕಲಾಟ ಬಂದ್ರೆ, ತನ್ನ ಕುಟುಂಬದ ಹಿತವನ್ನು ಹಿಡಿಯುತ್ತಾನೆ. ಆದರೆ ಸಂಘ ಇದನ್ನ ಉಲ್ಟಾ ಮಾಡುವಂತಹ ಪ್ರಯತ್ನ ಮಾಡುತ್ತೆ. ತನಗಿಂತ ಕುಟುಂಬ ದೊಡ್ಡದು, ತನಗಿಂತ ಸಮಾಜ ದೊಡ್ಡದು, ತನಗಿಂತ ದೇಶ ದೊಡ್ಡದು ಅನ್ನೋದನ್ನ ಕಲಿಸೋ ಪ್ರಯತ್ನ ಸಂಘದ್ದು. ಹಾಗಾಗಿ ನಮ್ಮ ನಿಷ್ಠೆ ವ್ಯಕ್ತಿಗಲ್ಲ, ಸಂಘಟನೆಗೆ. ನಮ್ಮ ನಿಷ್ಠೆ ಸಂಘಟನೆಗಲ್ಲ ದೇಶಕ್ಕೆ, ದೇಶನಿಷ್ಠೆ ಮತ್ತು ಸಂಘನಿಷ್ಠೆ ಗಳ ನಡುವೆ ಪ್ರಶ್ನೆ ಬಂದು ದೇಶದ ನಿಷ್ಠೆಗೆ ತೊಂದರೆ ಆಗೋದಾದ್ರೆ ಆಗ ಸಂಘನಿಷ್ಠೆಯನ್ನು ಬಿಡಬೇಕಾಗುತ್ತೆ. ಹಾಗಾಗಿ ಡಾಕ್ಟರ್ ಜಿ ಸಣ್ಣ ಸಣ್ಣ ಸಂಗತಿಗಳ ಮುಖಾಂತರ ಇದನ್ನ ಕಲಿಸ್ತಿದ್ರು.




(ಸಶೇಷ: ಮುಂದಿನ ಭಾಗದೊಂದಿಗೆ ಮುಕ್ತಾಯ )



ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೨

Nov 9, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೨

ಸಂಘ ಅನ್ನೋದಕ್ಕಿಂತ ಸಂಘ ಮಾಡುವಂತಹ ಕೆಲಸಕ್ಕೆ ವಿಜಯ ನಿಶ್ಚಿತ. ಸಂಘದ ವಿಚಾರ ಇದ್ದಾಗ ಮಾತ್ರ ಪ್ರಪಂಚ ಉಳಿಯೋದಕ್ಕೆ ಸಾಧ್ಯ, ಎಂಬ ನಂಬಿಕೆ ಯೊಂದಿಗೆ ನಾವು ಸಂಘದ ಕೆಲಸವನ್ನ ಮಾಡ್ಬೇಕು.

ಮಾನನೀಯ ದತ್ತೊಪಂತ್ ತೇಂಗಡಿಜಿಯವರು ಸಂಸತ್ ಸದಸ್ಯರಾಗಿದ್ರು. ಹೀಗೆ ಸದಸ್ಯರ ಜೊತೆ ಮಾತಾಡುತ್ತಿದ್ರು. ಎಲ್ಲ ಪಕ್ಷದವರು ಇದ್ರೂ. ಯಾರೋ ಒಬ್ಬರು 'ಯಾರು ಅದು ಆರ್ಎಸ್ಸೆಸ್ ಶುರು ಮಾಡಿದ್ದು?' ಅಂತ ಹೇಳಿದ್ದಕ್ಕೆ ಇನ್ನೊಬ್ಬರು 'ಆರೆಸ್ಸಸ್ ಶುರು ಮಾಡಿದ್ದು ಯಾರು ಅಂತ ಗೊತ್ತಿಲ್ವಾ?' ಅಂದಾಗ ಮಾನನೀಯ ದತ್ತೊಪಂಥರು 'ಗೊತ್ತಿಲ್ದೆ ಇರೋದು ಸರಿ ಇದೆ ' ಅಂತ ಸಮಾಧಾನ ಮಾಡಿದರು. ಡಾಕ್ಟರ್ ಜಿಯವರ ನೆರಳು ಡಾಕ್ಟರ್ ಜಿಯವರಿಗಿಂತ ದೊಡ್ಡದಿದೆ. ಡಾಕ್ಟರ್ ಜಿ ಯಾವಾಗಲು ತಮ್ಮನ್ನ ಸಂಘಟನೆಗಿಂತ ದೊಡ್ಡವರನ್ನಾಗಿ ಮಾಡಿಕೊಳ್ಳಲೇ ಇಲ್ಲ. ಹಾಗಾಗಿ ಜಗತ್ತಿನಲ್ಲಿ ಡಾಕ್ಟರ್ ಜಿ ಯವರು ಗೊತ್ತಿಲ್ಲದಿರುವವರು ಸಾಕಷ್ಟು ಜನ ಇದ್ದಾರೆ ಆದರೆ ಆರೆಸ್ಸಸ್ ಗೊತ್ತಿಲ್ಲದಿರುವವರು ತುಂಬಾ ಕಡಿಮೆ. ಬರೆ ಡಾಕ್ಟರ್ ಜಿ ಅಂತಲ್ಲ, ಸಂಘದ ಸಾಕಷ್ಟು ಹಿರಿಯರು ಸಹ ಸಂಘದ ಪದ್ದತಿಯ ಕಾರಣಕ್ಕೆ ತಾವು ಸಾಕಷ್ಟು ದೊಡ್ಡ ವ್ಯಕ್ತಿಗಳಾದರೂ ಹೊರಗಡೆ ಪ್ರಪಂಚಕ್ಕೆ ಸಾಧಾರಣ ವ್ಯಕ್ತಿಗಳಾಗಿಯೇ ಇರ್ತಾರೆ.

ಮಾನನೀಯ ದತ್ತೊಪಂತ್ ತೇಂಗಡಿಜಿಯವರು ನಿಧನರಾದಾಗ ಪತ್ರಿಕೆಯ ಮೂಲೆಯಲ್ಲಿ 'ಭಾರತಿಯ ಮಜ್ದೂರ್ ಸಂಘದ ಸಂಸ್ಥಾಪಕ ದತ್ತೊಪಂತ್ ತೇಂಗಡಿಯವರು ನಿಧನರಾದರು' ಅಂತ ಬಂದಿತ್ತು. ವಾಜಪೇಯಿ, ಆಡ್ವಾಣಿ ಅಂಥವರನ್ನು ನಿರ್ಮಾಣ ಮಾಡಿದಂತಹ ತೇಂಗಡಿಜಿಯವರು ಎಷ್ಟು ದೊಡ್ಡ ವ್ಯಕ್ತಿಗಳೆಂದು ಅವರನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತು. ಆದರೆ ಹೊರಗಡೆ ಪ್ರಪಂಚಕ್ಕೆ ಅವರು ಸಾಧಾರಣ ವ್ಯಕ್ತಿಯಾಗಿಯೇ ಉಳಿದರು.

ನಿಧನರಾದ ಹೋ.ವೆ.ಶೇಷಾದ್ರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆ ಯಿತು. ಕಾರ್ಯಕ್ರಮಕ್ಕೆ ಆಡ್ವಾಣಿ, ವಾಜಪೇಯಿ ಯವರೆಲ್ಲ ಬಂದಿದ್ದರು. ನೆರೆದಿದ್ದ ಪತ್ರಕರ್ತರಿಗೆ ಸಿಕ್ಕಾಪಟ್ಟೆ ಆಶ್ಚರ್ಯ..! ಯಾರೋ ಶೇಷಾದ್ರಿ ಅನ್ನೋವ್ರು ಹೋಗಿದ್ದಕ್ಕೆ ಆಡ್ವಾಣಿ, ವಾಜಪೇಯಿ ಯವರೆಲ್ಲ ಯಾಕೆ ಬಂದಿದ್ದಾರೆ..!? ಅಂತ.

ಹೀಗೆ ಸಂಘದ ವಿಶೇಷ ಅಂದ್ರೆ ತನ್ನನ್ನ ತಾನು ದೊಡ್ಡವನನ್ನಾಗಿ ಮಾಡಿಕೊಳ್ಳದೆ ಇರೋದು.

ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟವನ್ನ ಜಾಸ್ತಿ ಮಾಡಿದಾಗ ಈ ದೇಶ ಉಳಿಯತ್ತೆ ಅನ್ನೋದು ನಮ್ಮ ವಿಚಾರ. ಸಂಘದ ಪ್ರಾರ್ಥನೆಯಲ್ಲೂ ನಾವು ಅದನ್ನೇ ಹೇಳ್ತೇವೆ. ಧರ್ಮದ ಆಧಾರದ ಮೇಲೆ ಈ ದೇಶದ ಸಮಾಜವನ್ನ ಸಂಘಟನೆ ಮಾಡಿ ಧರ್ಮ ರಕ್ಷಣೆ ಮಾಡೋ ಮುಖಾಂತರ ಈ ದೇಶವನ್ನ ಪರಮ ವೈಭವವನ್ನಾಗಿ ಮಾಡ್ತೇವೆ ಅಂತ.ನಾವು ಸಾಮಾನ್ಯವಾಗಿ ಮಾತಾಡ್ತಿರ್ತೇವೆ, 'ಯತೋ ಧರ್ಮಃ ತತೋ ಜಯಃ' ಅಂತ. ಆದರೆ ಅದರ ಪ್ರತ್ಯಕ್ಷ ಅನುಭವ ನಮಗೆ ಕಷ್ಟ.

ಇತ್ತೀಚಿಗೆ ಕೆ.ಎಸ.ಲಾಲ್ ಎಂಬುವರು 'ಇಂಡಿಯನ್ ಮುಸ್ಲಿಂ ಸ್ ಹೂ ಆರ್ ದೆ ?' ಅನ್ನೋ ಪುಸ್ತಕ ಬರೆದಿದ್ದಾರೆ. ಭಾರತದಲ್ಲಿ ಮುಸ್ಲಿಮರ ಸಂಖ್ಯೆ ಹೇಗೆ ಜಾಸ್ತಿಯಾಯ್ತು ಅನ್ನೋದನ್ನ ಅದರಲ್ಲಿ ಅವರು ಹೇಳಿದಾರೆ. ಮತಾಂತರ, ಹಿಂದೂ ಹೆಣ್ಣುಮಕ್ಕಳನ್ನು ಮ ದುವೆಯಾಗುವುದು, ಹೆಚ್ಚಿಗೆ ಹೆಣ್ಣುಮಕ್ಕಳನ್ನು ಮದುವೆ ಯಾಗುವುದು, ಯುದ್ಧಗಳಲ್ಲಿ ಹಿಂದೂ ಸೈನಿಕರನ್ನೇ ಮುಂದೆ ನಿಲ್ಲಿಸಿ ಯುದ್ಧ ಮಾಡುವುದು ಈ ಎಲ್ಲ ರೀತಿಗಳಿಂದ ಮುಸ್ಲಿಮರು ತಮ್ಮ ಸಂಖ್ಯೆಯನ್ನ ಹೆಚ್ಚಿಸಿಕೊಂಡರು ಅನ್ನೋದನ್ನ ಅವರು ಉಲ್ಲೇಖ ಮಾಡಿದಾರೆ.

ಅವತ್ತಿನ ಕಾಲದಲ್ಲಿ ಸಾಕಷ್ಟು ದೇವಸ್ಥಾನಗಳು ಇದ್ದವು, ಧರ್ಮದ ಬಗ್ಗೆ ಪ್ರವಚನ ಮಾಡುವವರಿದ್ದರು. ಹೀಗಿದ್ದೂ ಎಲ್ಲ ಕಡೆ ಹೊಡೆತ ಬಿತ್ತು. ಆಶ್ಚರ್ಯದ ವಿಷಯ ಅಂದರೆ, ಸಿಂಧ್ ಪ್ರಾಂತ್ಯ ದಿಂದ ಮುಸಲ್ಮಾನರ ಆಕ್ರಮಣ ಆಯ್ತು. ಬಂಗಾಳ, ಅಂದರೆ ಈಗಿನ ಬಾಂಗ್ಲಾದೇಶ, ಇರೋದು ಸಿಂಧ್ ಪ್ರಾಂತ್ಯದಿಂದ ಸಾವಿರಾರು ಮೈಲುಗಳ ದೂರ. ಆದರೂ ಅಲ್ಲಿ ಮತಾಂತರ ಮಾಡಿದ್ರು. ಅದರ ಪ್ರಮಾಣ ಎಷ್ಟು ಅಂದ್ರೆ ನಿಶ್ಚಿತ ಸಮಯದಲ್ಲಿ ಕಪ್ಪ ಕೊಡದಿದ್ದಾಗ ತನ್ನ ಕುಟುಂಬ ಸಮೇತ ಅವನು ಇಸ್ಲಾಂಗೆ ಮತಾಂತರವಾಗಬೇಕಾಗಿತ್ತು. ಒಬ್ಬ ರಾಜ ಕಪ್ಪ ಕೊಡಕ್ಕೆ ಹೋಗ್ತಾನೆ. ಅವನ ಪಕ್ಕದ ರಾಜ್ಯದ ಒಬ್ಬ ರಾಜ ಬಂದಿರೋದಿಲ್ಲ. ಅವನು ಸ್ವಲ್ಪ ದೊಡ್ಡ ರಾಜ. ಅವನು ಮತಾಂತರನಾದರೆ ಕಷ್ಟ ಅಂತ ಅವನ ಕಪ್ಪವನ್ನು ಇವನೇ ಕೊಟ್ಟು ಇಸ್ಲಾಂಗೆ ಮತಾಂತರವಾಗುತ್ತಿದ್ದ.

ಮೊಹಮ್ಮದ್ ಕುಲಿಖಾನ್ ಒಬ್ಬ ಬ್ರಾಹ್ಮಣನಾಗಿದ್ದವ, ಜಲಾಲುದ್ದೀನ್ , ಅವರು ಇವತ್ತಿನ ಬಾಂಗ್ಲಾದೇಶವನ್ನ ನಿರ್ಮಾಣ ಮಾಡಕ್ಕೆ ಕಾರಣರಾದರು. ಅಂದರೆ ಅಂದಿಗೂ, ಇಂದಿಗೂ ನಾವು ಏನನ್ನ ಅಂದುಕೊತೀವಿ ಎಲ್ಲಿ ಧರ್ಮವಿರುತ್ತೋ ಅಲ್ಲಿ ವಿಜಯ ಅಂತ ಅದರ ಪ್ರತ್ಯಕ್ಷ ಅನುಭವ ನಮಗಿಲ್ಲ. ಅಂದರೆ ನಮ್ಮ ಕಲ್ಪನೆಯಲ್ಲಿ ನಾವು ಯಾವುದನ್ನ ಧರ್ಮ ಅಂತ ನಂಬಿದ್ದೇವೋ ಆ ಧರ್ಮ ಇದ್ದಾಗಲೂ ನಾವು ಸೋತಿದೇವೆ. ಹಾಗಾದರೆ ನಿಜವಾದ ಧರ್ಮ ಅಂದರೆ ಯಾವುದು ಅಂತಲಾದರೂ ಗೊತ್ತಾಗಬೇಕು ಅಥವಾ ಯತೋ ಧರ್ಮಃ ತತೋ ಜಯಃ ಅನ್ನೋದು ಗೆಲುವಲ್ಲ ಅನ್ನೋದಾದ್ರೂ ಗೊತ್ತಾಗಬೇಕು.

ಹೀಗಾಗಿ ಸಂಘಧರ್ಮ ಉಳಿದಾಗ ವ್ಯಕ್ತಿಗತವಾದಂತಹ ನಮ್ಮ ಎಲ್ಲ ಸಂಗತಿಗಳೂ ಉಳಿಯೋದಕ್ಕೆ ಸಾಧ್ಯ. ಆ ಸಂಘಧರ್ಮವನ್ನ ಪಾಲನೆ ಮಾಡುವಂತಹ ವ್ಯವಸ್ಥೆಯನ್ನ ಡಾಕ್ಟರ ಜಿ ನಿರ್ಮಾಣ ಮಾಡಿದ್ರು. ಅಂದರೆ ಸರ್ವಸಾಮಾನ್ಯ ಮನುಷ್ಯನ ದೇಶಭಕ್ತಿಯ ಮಟ್ಟವನ್ನ ಜಾಸ್ತಿ ಮಾಡಿದ್ರು.


(ಸಶೇಷ)

Nov 4, 2011

ಮತ್ತೂರು ವಿಜಯದಶಮಿ ಬೌದ್ಧಿಕ್ : ಭಾಗ - ೧

ಮತ್ತೂರು ವಿಜಯದಶಮಿ ಉತ್ಸವ
ತಾರೀಖು: ಅಕ್ಟೋಬರ್ ೬, ೨೦೧೧, ಗುರುವಾರ
ಬೌದ್ಧಿಕ್: ಶ್ರೀಯುತ ರಾಜಾರಾಮ್, ಮತ್ತೂರು

ವಿಜಯದಶಮಿ ಹಿಂದೂ ಸಮಾಜದ ಒಂದು ಉತ್ಸವ. ಸಂಘ ಯಾವುದೇ ಉತ್ಸವಗಳನ್ನ ಅಷ್ಟೇ ಅಲ್ಲ ಯಾವುದನ್ನು ಹೊಸದಾಗಿ ಪ್ರಾರಂಭ ಮಾಡಿಲ್ಲ. ಸಂಘದ ವಿಶೇಷವೇ ಸಂಘ ಪ್ರಾರಂಭ ಆದಂತಹ ದಿನ.

ಸಂಘದ ಕೆಲಸವನ್ನ ಎಷ್ಟೋ ಉತ್ಸಾಹದಿಂದ ಮಾಡಿದ ಎಷ್ಟೋ ದಿನಗಳ ನಂತರ ನಮಗೆ ಸಹಜವಾಗಿ ಅನ್ಸುತ್ತೆ, ಎಷ್ಟು ದಿನದವರೆಗೆ ಸಂಘದ ಕೆಲಸವನ್ನ ಮಾಡೋದು, ಯಾವುದು ಇದಕ್ಕೆ ಗುರಿ, ಯಾವುದು ಕೊನೆ ಅಂತ ಅನ್ನಿಸೋದಕ್ಕೆ ಶುರು ಆಗುತ್ತೆ. ಯಾಕೆ ಅಂದರೆ ಸಾಮಾನ್ಯವಾಗಿ ಮನುಷ್ಯನಿಗೆ ಇಷ್ಟು ದಿನದ ಕೆಲಸ ಅಂತ ನಿಗದಿಯಾಗಿರೋ ಕೆಲಸವನ್ನ ಮಾಡೋದು ಸುಲಭ. ಆದರೆ ನಿರಂತರವಾಗಿ ಮಾಡುವ ಕೆಲಸ ಕಷ್ಟ. ವರ್ಷದ ಅಷ್ಟು ದಿನವೂ ನಿತ್ಯ ಒಂದರಂತೆ ಸೂರ್ಯನಮಸ್ಕಾರ ಮಾಡೋದು ಕಷ್ಟ. ಆದರೆ ೧ ತಿಂಗಳ ಅವಧಿಯಲ್ಲಿ ೫೦೦ ಸೂರ್ಯನಮಸ್ಕಾರ ಮಾಡೋದು ಸುಲಭ.

ಸಂಘದ ಕೆಲಸವೂ ನಿರಂತರವಾಗಿ ಮಾಡ್ತಕ್ಕಂತಹ ಕೆಲಸ. ಇದಕ್ಕೆ ಗೆಲುವು ಸಿಗುತ್ತಾ? ಅಂತ ಮನುಷ್ಯ ಸಹಜವಾಗಿ ಯೋಚಿಸ್ತಾನೆ. ಯಾಕೆಂದ್ರೆ ಮನುಷ್ಯನಿಗೆ ತಕ್ಷಣ ಫಲ ಸಿಗಬೇಕು ಅಂತ ಯೋಚಿಸ್ತಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಸಂಘಚಾಲಕರ ವರ್ಗ ನಡೆಯಿತು. ವರ್ಗದಲ್ಲಿ ಪರಮ ಪೂಜನೀಯ ಸರಸಂಘಚಾಲಕರ ಅವಧಿಯಲ್ಲಿ ಅವರೊಂದು ಕಥೆ ಹೇಳಿದರು.

ಮುಸಲ್ಮಾನರ ಆಡಳಿತ ಕಾಲದಲ್ಲಿ ಇಬ್ಬರು ಸ್ನೇಹಿತರಿದ್ದರು. ಒಬ್ಬ ಮುಸ್ಲಿಂ ಇನ್ನೊಬ್ಬ ಹಿಂದೂ. ಒಮ್ಮೆ ಆ ಮುಸಲ್ಮಾನನಿಗೆ ೧೦೦ ರುಪಾಯಿ ಬೇಕಾಗುತ್ತೆ. ಸ್ನೇಹಿತನ ಮನೆಗೆ ಕೇಳಕ್ಕೆ ಬರ್ತಾನೆ, ಆದರೆ ಅವನು ಕೃಷಿಕ, ಗದ್ದೆಗೆ ಹೋಗಿರ್ತಾನೆ. ಅವನ ಮಡದಿಗೆ 'ನಾನಿಲ್ಲೇ ಮಸೀದಿಯಲ್ಲಿ ಇರ್ತೇನೆ, ಬಂದ ಕೂಡಲೇ ಹೇಳಿ ಕಳಿಸಿ' ಅಂತ ಹೇಳಿ ಮಸೀದಿಗೆ ಹೋಗ್ತಾನೆ. ಸ್ನೇಹಿತ ಬಂದೊಡನೆಯೇ ಮಸೀದಿಗೆ ಹೋಗ್ತಾನೆ ಅಲ್ಲಿ ಒಬ್ಬ ಮೌಲ್ವಿಯ ಪ್ರವಚನ ಆಗ್ತಿರುತ್ತೆ. ಇವನು ಪ್ರವಚನವನ್ನ ಪೂರ್ಣ ಕೇಳಿ ನಂತರ ಸ್ನೇಹಿತನಿಗೆ 'ಪ್ರವಚನ ತುಂಬಾ ಚೆನ್ನಾಗಿತ್ತು, ಅವರನ್ನು ಪರಿಚಯ ಮಾಡಿಸು' ಅಂತ ಕೇಳ್ತಾನೆ.

ಪರಿಚಯ ಮಾಡಿಸಿದ ನಂತರ, ಮೌಲ್ವಿಯನ್ನ ಕುರಿತು ಹಿಂದೂ ಸ್ನೇಹಿತ 'ನಿಮ್ಮ ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಒಂದು ವಿಷಯ ನನಗೆ ಹಿಡಿಸಲಿಲ್ಲ' ಹೇಳಿದಾಗ ಅದಕ್ಕೆ ಮೌಲ್ವಿ ಆಶ್ಚರ್ಯದಿಂದ 'ಯಾವ ವಿಷಯ?' ಅಂತ ಕೇಳ್ತಾರೆ. ಅದಕ್ಕೆ ಹಿಂದೂ ಸ್ನೇಹಿತ 'ದೇವರ ದೇವತ್ವ ಅನ್ನೋದು ಯಾರಿಗೂ ಅರ್ಥ ವಾಗದ ವಿಷಯ ಅಂತ ಹೇಳಿದ್ರಲ್ಲ ಆದರೆ ನನಗೆ ಗೊತ್ತಾಗುತ್ತೆ, ಬೇಕಾದ್ರೆ ತೋರಿಸ್ತೀನಿ, ಆದರೆ ಒಂದು ಷರತ್ತು' ಅಂತ ಹೇಳಿದಾಗ ಅಲ್ಲಿದ್ದವರಿಗೆಲ್ಲ ಆಶ್ಚರ್ಯ..! ಮೌಲ್ವಿಗೆ ಗೊತ್ತಾಗದೆ ಇರೋ ವಿಷಯ ಅವನಿಗೆ ಹೇಗೆ ಗೊತ್ತಾಗುತ್ತೆ ಅಂತ ! 'ವಿಷಯ ಸಮರ್ಥನೆಯ ನಂತರ ನಂಗೆ ೨೦೦ ರುಪಾಯಿಯನ್ನು ಕೊಡಬೇಕು' ಎಂಬ ಶರತ್ತನ್ನು ಮುಂದಿಟ್ಟು ಎಲ್ಲರನ್ನು ನದಿಯ ದಂಡೆಯ ಬಳಿಗೆ ಕರೆದುಕೊಂಡು ಹೋಗ್ತಾನೆ.

ನದಿಯ ನೀರನ್ನು ತೋರಿಸುತ್ತ 'ಇದೇ ದೇವರ ದೇವತ್ವ' ಅಂತ ತೋರಿಸುತ್ತ 'ಈ ನೀರು ಎಲ್ಲಿಂದ ಬಂತು, ಹೇಗೆ ಬಂತು' ಅಂತ ಹೇಳಿದಾಗ ಎಲ್ಲ ಒಪ್ಪಿಕೊಂಡರು, ೨೦೦ ರುಪಾಯಿಯನ್ನು ಕೊಟ್ರು. ೧೦೦ ರುಪಾಯನ್ನು ಮುಸ್ಲಿಂ ಸ್ನೇಹಿತನಿಗೆ ಕೊಟ್ಟು, ತಾನು ೧೦೦ ರುಪಾಯನ್ನು ಇಟ್ಕೊಂಡ.

ಇದೇ ರೀತಿ ಇನ್ನೊಮ್ಮೆ ಮುಸ್ಲಿಮ ಸ್ನೇಹಿತನಿಗೆ ೨೦೦ ರುಪಾಯಿ ಬೇಕಾಗುತ್ತೆ, ಹಿಂದೂ ಸ್ನೇಹಿತ ಮಸೀದಿಗೆ ಹೋಗ್ತಾನೆ, ಪ್ರವಚನ ಆಗುತ್ತೆ, ಯಥಾ ಪ್ರಕಾರ ಪ್ರವಚನ ಮಾಡಿದ ಮೌಲ್ವಿಯನ್ನ ಕುರಿತು 'ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಇನ್ನೊಬ್ಬರ ಮನಸ್ಸಿನಲ್ಲಿ ಇರೋ ವಿಷಯ ವನ್ನ ಹೇಳೋದಿಕ್ಕಾಗಲ್ಲ ಅನ್ನೋದು ವಿಷಯ ಹಿಡಿಸಲಿಲ್ಲ. ಯಾಕೆಂದ್ರ ನಾನ್ ಹೇಳ್ತೀನಿ ಅಂದ, ಆದ್ರೆ ೪೦೦ ರುಪಾಯಿ ಷರತ್ತು ' ಅಂದ, ಎಲ್ಲ ಒಪ್ಕೊಂದ್ರು. ಹೇಗೆ ಅಂತ ಕೇಳಿದಾಗ 'ಈಗ ನಾನು ನಿಮ್ಮ ಮನಸ್ಸಿನಲ್ಲಿ ಇರೋ ವಿಷಯ ಹೇಳ್ತೀನಿ.' ಎಲ್ಲ ಆಯ್ತು ಅಂದ್ರು. 'ಇಡೀ ಪ್ರಪಂಚದಲ್ಲಿ ಇಸ್ಲಾಂ ಧರ್ಮ ಒಂದೇ ಶ್ರೇಷ್ಠ . ಜಗತ್ತಿನ ಎಲ್ಲರನ್ನು ಇಸ್ಲಾಂನ ಅನುಯಾಯಿಗಳಾಗಿ ಮಾಡ್ಬೇಕು' ಎಂದು ಯಾವುದೇ ಕಾರಣಕ್ಕೂ ಅವನು ತಿರಸ್ಕಾರ ಮಾಡಬಾರದು ಅನ್ನೋ ರೀತಿಯಲ್ಲಿ ಹೇಳಿದ. ಮೌಲ್ವಿ ಸರಿ ಅಂತ ಒಪ್ಕೊಂಡು ೪೦೦ ರುಪಾಯಿಯನ್ನು ಕೊಟ್ಟ, ಯಥಾ ಪ್ರಕಾರ ೨೦೦ ರುಪಾಯಿ ಸ್ನೇಹಿತನಿಗೆ, ೨೦೦ ತನಗೆ.

ಮತ್ತೊಮ್ಮೆ ಮುಸ್ಲಿಮ ಸ್ನೇಹಿತನಿಗೆ ೧೦೦೦ ರುಪಾಯಿ ಬೇಕಾಗುತ್ತೆ, ಕೊಡಲು ಮಸೀದಿಗೆ ಹೋಗ್ತಾನೆ, ಯಥಾ ಪ್ರಕಾರ ಪ್ರವಚನ ಮಾಡಿದ ಮೌಲ್ವಿಯನ್ನ ಕುರಿತು 'ಪ್ರವಚನ ತುಂಬಾ ಚೆನ್ನಾಗಿತ್ತು, ಆದರೆ ಪ್ರಳಯ ಆಗುತ್ತೆ ಅನ್ನೋದು ಸುಳ್ಳು. ಪ್ರಳಯ ಖಂಡಿತ ಆಗಲ್ಲ. ಈ ಸಲ ೨೦೦೦ ರುಪಾಯಿ ಷರತ್ತು ' ಅಂದ, ಎಲ್ಲ ಒಪ್ಪಿಕೊಂಡರು. ೨೦೦೦ ರುಪಾಯಿ ಕೊಟ್ರು. ಆದರೆ ಅವನ ಮುಸ್ಲಿಂ ಸ್ನೇಹಿತ ಹೇಗೆ ನಿರೂಪಿಸ್ತೀಯ ಅಂತ ಕೇಳಿದಾಗ 'ಅಲ್ಲ ಕಣಯ್ಯಾ, ಪ್ರಳಯ ಆಗದೆ ಇದ್ರೆ ಏನು ತೊಂದ್ರೆ ಇಲ್ಲ. ಅಕಸ್ಮಾತ್ ಪ್ರಳಯ ಆದ್ರೆ ಕೊಡೋಕ್ಕೆ ನಾನೂ ಇರೋಲ್ಲ, ತೊಗೊಳಕ್ಕೆ ಅವರು ಇರೋಲ್ಲ ಅಂದ'.

ಸಂಘದ ಕೆಲಸಕ್ಕೆ ವಿಜಯ ಅನ್ನೋದು ಶತಃಸಿದ್ದ. ಅಕಸ್ಮಾತ್ ವಿಜಯ ಸಿಗದೇ ಇದ್ದಲ್ಲಿ ಜಗತ್ತೇ ಇರೋಲ್ಲ ಎನ್ನುವ ನಂಬಿಕೆ ಸ್ವಯಂಸೇವಕರದ್ದಾಗಿರಬೇಕು ಅನ್ನೋ ವಿಷಯವನ್ನ ಸರಸಂಘಚಾಲಕರು ಹೇಳಿದ್ರು.

(ಸಶೇಷ)