Apr 5, 2009

ರಾಜ್ಯ ರಾಜಕಾರಣ - ರಾಜ್ಯದ ಮಾನ ಹರಣ

ಯಾವೊಬ್ಬ ರಾಜಕಾರಣಿಗಾದರೂ ನಾಚಿಕೆ-ಮಾನ-ಮರ್ಯಾದೆಗಳೇನಾದರೂ ಇದ್ದಿದ್ದರೆ ನಮ್ಮ ರಾಜ್ಯದಲ್ಲಿ ಇ ಮಟ್ಟದ ಹೊಲಸು ರಾಜಕಾರಣ ಇರುತ್ತಿರಲಿಲ್ಲ! ಇಂದಿದ್ದ ಪಕ್ಷದಲ್ಲಿ ನಾಳೆ ಇರುವುದಿಲ್ಲ! ಇದೂ ಒಂದು ಜೀವನವಾ? ಎಲ್ಲರಿಗೂ ಬಂಗಾರಪ್ಪನವರೇ ಆದರ್ಶವಾದರೆ ರಾಜ್ಯದ ಗತಿ?

ಭಾರತೀಯ ಜನತಾ ಪಕ್ಷ ಈ ಸಲ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ ಎಂಬ ಕನಸು ಕಂಡವರೆಲ್ಲರೂ ತಮ್ಮ ಸಂಸಾರ ಸಮೇತ ಹೊರಟಿದ್ದೆ ಹರಟಿದ್ದು! ಒಂದು ಕಾಲದಲ್ಲಿ 'ಜಾತ್ಯಾತೀತವಾದ' ಎಂಬ ಜಾತೀವಾದದ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಿದ್ದ, ಬಿಜೆಪಿಯನ್ನ 'ಕೋಮುವಾದಿ' ಎಂದು ಬಣ್ಣಿಸುತ್ತಿದ್ದ 'ಸೆಕ್ಯುಲರ್ ಲೀಡರ್'ಗಳು ಈಗ ಅದೇ ಪಕ್ಷದ ಹಿಂದೆ ಅಧಿಕಾರದ ಜೊಲ್ಲು ಸುರಿಸುತ್ತ ಯಾವ ಅಳುಕೂ ಇಲ್ಲದೆ ಹೋಗುತ್ತಿದ್ದಾರೆ, ಛೆ! ಒಬ್ಬರಿಗಾದರೂ ನಿಯತ್ತು ಅನ್ನೋದು ಇದೆಯಾ?

'ರಾಷ್ಟ್ರೀಯ ಚಾರಿತ್ರ್ಯ'ವನ್ನು ತನ್ನ ಸಿದ್ಧಾಂತದ ಆಧಾರ ಎಂದೇ ಬಿಂಬಿಸಿರುವ ಬಿಜೆಪಿ ಕೂಡ, 'ರಾಷ್ಟ್ರೀಯತೆ'ಯನ್ನೇ ಅನುಮಾನದಿಂದ ನೋಡುವವರನ್ನೆಲ್ಲಾ ಆಲಿಂಗಿಸಿ, 'ಅಧಿಕಾರವೇ ತನ್ನ ಅನಿವಾರ್ಯತೆ' ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದೆ. ತನ್ನ ಸಿದ್ದಾಂತದ ಜತೆಗೆ ಪರೋಕ್ಷವಾಗಿ 'ರಾಜೀ' ಮಾಡಿಕೊಳ್ಳುವತ್ತ ಸಾಗಿದೆ.

No comments:

Post a Comment