Mar 22, 2009

ಪಕ್ಷಾತೀತ ಸ್ಥಾನಕ್ಕೆ 'ಪಕ್ಷ ನಿಷ್ಠ' ವ್ಯಕ್ತಿ!

ಇಡೀ ದೇಶಕ್ಕೆ ದೇಶವೇ ಅನುಮಾನ ಪಡುತ್ತಿರುವ ನವೀನ್ ಚಾವ್ಲಾರವರನ್ನು ದೇಶದ ಅತ್ಯಂತ ಮುಖ್ಯವಾದ, ಸಂವಿಧಾನದ ಗೌರವಗಳನ್ನು ಎತ್ತಿ ಹಿಡಿಯುವ ಅತ್ಯಂತ ಜವಾಬ್ದಾರಿಯುತವಾದ ಹುದ್ದೆಯಾದಂತಹ 'ಮುಖ್ಯ ಚುನಾವಣಾ ಆಯುಕ್ತ'ರ ಸ್ಥಾನಕ್ಕೆ ಹಲವಾರು ಪ್ರತಿರೋಧಗಳ ಹಾಗು ಅದಕ್ಕಿಂತ ಹೆಚ್ಚಾಗಿ ಅವರ ವಿರುದ್ಧದ ಆಪಾದನೆಗಳ ನಡುವೆಯೂ ಅವರನ್ನೇ ಸುಉಚಿಸಿರುವುದು ಕಾಂಗ್ರೆಸ್ಸಿನ ಸ್ವಾರ್ಥ ರಾಜಕಾರಣಕ್ಕೆ ಉತ್ತಮ ನಿದರ್ಶನವಾಗಿದೆ.

ಯಾರು ಆಪಾದನೆ ಮಾಡಿದರೇನು? ಅವುಗಳನ್ನು ದೇಶದ ಮುಂದೆ ಸುಳ್ಳೆಂದು ಸಾಬೀತು ಪಡಿಸಿದ ನಂತರ ಅವರನ್ನು ಮುಖ್ಯ ಚುನಾವಣಾ ಆಯುಕ್ತರ ಸ್ಥಾನಕ್ಕೆ ಸೂಚಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಹಾಗು ತನ್ನ ಘನತೆಗೆ ತಕ್ಕ ಗೌರವ.

ನವೀನ್ ಚಾವ್ಲಾರವರು ಕಾಂಗ್ರೆಸ್ ಪಕ್ಷದ ಪರವಾಗಿ ವರ್ತಿಸುತ್ತಿರುವುದು ಹಾಗೂ ವರ್ತಿಸಿರುವುದಕ್ಕೆ ಹಲವಾರು ದಾಖಲೆಗಳು ಇರುವಾಗಲೂ, ಅವುಗಳ ಬಗೆಗೆ ಪತ್ರಿಕೆಗಳಲ್ಲಿ ಬಂದ ನಂತರವೂ, ಈ ವಿಷಯವಾಗಿ ಯಾವುದೇ ತನಿಖೆಗಳಿಲ್ಲದೆ ಕೇಂದ್ರ ಸರ್ಕಾರ ಅತ್ಯಂತ ರಾಜಾರೋಷವಾಗಿಯೇ 'ನವೀನ್ ಚಾವ್ಲಾರವರೆ ಮುಂದಿನ ಚುನಾವಣಾ ಆಯುಕ್ತ' ಎಂದು ಘೋಷಿಸಿರುವುದು ಭಾರತದ ಸಂವಿಧಾನಕ್ಕೆ ಮಾಡಿದ ಅಪಚಾರವಲ್ಲದೆ ಮತ್ತೇನು?

ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಪಕ್ಷಾತೀತವಾಗಿ ಕೆಲಸ ನಿರ್ವಹಿಸಬೇಕಾದಂತಹ ನವೀನ್ ಚಾವ್ಲಾರವರು ಆಗಲೇ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು 'ದಾಖಲೆ'ಗಳಿಂದ ತೋರಿಸಲ್ಪಟ್ಟಿರುವುದು ದೇಶದ ಘನತೆಗೇ ಅಗೌರವ!

ಬರೇ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದರು ಎಂಬ ಒಂದೇ ಕಾರಣಕ್ಕೆ ಪ್ರತಿಭಾ ಪಾಟೀಲ್ ಎಂಬವರು ರಾಷ್ಟ್ರಪತಿಯಾಗಿರುವಾಗ, ಹುದ್ದೆಗಳಲ್ಲಿ ಕುಖ್ಯಾತಿ ಪಡೆದರೂ ಬಡ್ತಿ ಪಡೆಯುವುದರಲ್ಲಿ ಆಶ್ಚರ್ಯವಿದೆಯಾ?

1 comment: