Jul 15, 2009

ಸಂಸ್ಕೃತದ ಜ್ಞಾನ ಎಲ್ಲ ವರ್ಗಗಳಿಗೂ ಲಭಿಸುವಂತಾಗಲಿ

ಬೆಂಗಳೂರಿನಲ್ಲಿ ನಡೆದ ೫ನೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ 'ಸಂಸ್ಕೃತ ವಿವಿ ಬೇಡ' ಎನ್ನುವ ಕುರಿತಾದ ಕಾಮಿಡಿಗಳನ್ನು ಮಾಡಲಿಕ್ಕೆ ಮೀಸಲಾದಂತಿತ್ತು!

ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಏನು ಮಾಡಬೇಕು ಎಂದು ಚಿಂತಿಸುವುದನ್ನು ಬಿಟ್ಟು ನಕಾರಾತ್ಮಕ ಧೋರಣೆಯಡಿ ಸಂಸ್ಕೃತ ವಿವಿ ಬೇಡ ಅಂತ ಹೇಳಲಿಕ್ಕೆಂದು ಕೆಲ ಸಾಹಿತಿಗಳ ನಡುವೆ ಸ್ಪರ್ಧೆ ಏರ್ಪಟ್ಟಿರುವುದು ಸಾಹಿತಿಗಳ ಬೌದ್ಧಿಕ ಡೋಂಗಿತನದ ಪರಮಾವಧಿಯಾಗಿದೆ.

ಕಿ.ರಂ.ನಾಗರಾಜ್ ರವರು ತಮ್ಮನ್ನು ತಾವು ಏನೆಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ತಿಳಿಯಲಾಗಲಿಲ್ಲ. ಅವರೇ ಹೇಳಿದ ಹಾಗೆ ಭಾಷೆಯನ್ನು ತಿಳಿಯಲು ಪಂಡಿತರ ಅವಶ್ಯವಿರುವಂತಹ, ಸೀಮಿತ ವಲಯ ಮಾತ್ರ ಓದುತ್ತಿರುವಂತಹ ಅತ್ಯಂತ ಪ್ರಾಚೀನ ಭಾಷೆಯಾದ ಸಂಸ್ಕೃತವನ್ನು ಬರೇ ಉಳಿಸುವುದಕ್ಕಷ್ಟೇ ಅಲ್ಲದೆ ಸಮಾಜದ ಎಲ್ಲ ವಲಯ ಹಾಗು ವರ್ಗಗಳಿಗೂ ತಲುಪುವಂತೆ ಬೆಳೆಸಲು ಒಂದು ವಿಶ್ವವಿದ್ಯಾಲಯ ಅತ್ಯಂತ ಪುಉರಕ ಎಂದು ಒಬ್ಬ ಸಾಹಿತಿಗೆ ಅನಿಸದಿರುವುದೇ ಆಶ್ಚರ್ಯ! ಅಂಥಾದರಲ್ಲಿ ತಮ್ಮ ಅಸಮ್ಮತಿಯನ್ನು ಒಂದು ವೇದಿಕೆಯ ಮೇಲೆ ಹರಿಯಬಿಟ್ಟಿರುವುದು ಅವರಿಗೆ ಶೋಭೆಯೇ?

ನಮ್ಮ ದೇಶಕ್ಕೆ ಸಾಂಸ್ಕೃತಿಕ ಹಾಗು ಭಾಷಾ ಕ್ಷೇತ್ರದಲ್ಲಿ ಜಗತ್ತಿನಲ್ಲೇ ವಿಶೇಷ ಸ್ಥಾನವಿರುವುದರ ಹಿಂದೆ ಸಂಸ್ಕೃತದ ಪಾತ್ರ ಅತ್ಯಂತ ಹಿರಿದು ಎಂಬುದನ್ನು ಯಾರಾದರೂ ಅಲ್ಲಗೆಳೆಯಲು ಸಾಧ್ಯವೇ?

ನಾನು ಮತ್ತೂರಿನವ (ಸಂಸ್ಕೃತ ಗ್ರಾಮ ಎಂಬ ಹೆಸರೂ ಇದೆ) ಎಂದರೆ 'ನಿಮಗೆ ಸಂಸ್ಕೃತ ಬರುತ್ತೆ ಅಲ್ವಾ?' ಎಂದು ಕೇಳದವರೇ ಇಲ್ಲ! ಕೇಳಿ ಅವ್ಯಕ್ತ ಹೆಮ್ಮೆಯನ್ನು ಅನುಭವಿಸಿದವರೇ ಇಲ್ಲ! ಈ ಹೆಮ್ಮೆ ನನಗೆ ಸಂಸ್ಕೃತ ಬರುತ್ತೋ ಬರಲ್ವೋ ಎಂಬುದಕ್ಕಲ್ಲ. ಸಂಸ್ಕೃತಕ್ಕೆ ವಿಶೇಷ ಸ್ಥಾನ ನೀಡಿ, ಶಾಲಾ ಪಠ್ಯವನ್ನಾಗಿ ಮಾಡಿ, ಹೆಚ್ಚಾಗಿ ಬಳಸುವ ಗ್ರಾಮ ನಮ್ಮ ಭಾರತದಲ್ಲಿದೆ ಎಂಬ ಹೆಮ್ಮೆ ಅದು!

ಸಂಸ್ಕೃತ ವಿವಿಯ ಕಾರಣದಿಂದ ಆ ಭಾಷೆಯಲ್ಲಿ ಅನನ್ಯ ಜ್ಞಾನ ಭಂಡಾರ ಶ್ರೀಯುತ ನಾಗರಾಜ್ ರ ಸಮೇತ ಸಮಾಜದ ಎಲ್ಲ ವಲಯ ಹಾಗು ವರ್ಗಗಳಿಗೂ ಲಭಿಸುವಂತಾಗಲಿ.

1 comment:

  1. ಸಂಸ್ಕೃತಭಾಷೆಯ ಬಗ್ಗೆ ಇಲ್ಲೊಂದು ಸುಭಾಷಿತ

    भाषासु मुख्या मधुरा
    दिव्या गीर्वाणभारती ।
    तस्यां हि काव्यम् मधुरम्
    तस्मादपि सुभाषितम् ॥

    The most important and sweetest of all languages is the divine language of Gods (Sanskrit). Poetry is the sweetest literature in Sanskrit and 'Subhashitas' are sweetest verses in Sanskrit poetry.

    ReplyDelete