Aug 26, 2019

ಯುವಾ ಬ್ರಿಗೇಡಿನ '5th Pillar' - ಭಾಗ ೧

ದಿನ (ಆಗಸ್ಟ್ ೧೦) ಒಂದು ಅತ್ಯದ್ಭುತ ಕಾರ್ಯಕ್ರಮದ ಭಾಗಿಯಾಗಿದ್ದು ನನ್ನ ಅದೃಷ್ಟವೇ ಸರಿ! ಇದರ ಹೆಸರು ಫಿಫ್ತ್ ಪಿಲ್ಲರ್ (5th Pillar)! ಇದನ್ನು ಆಯೋಜಿಸಿದ್ದು ಯುವ ಬ್ರಿಗೇಡ್.  ನನಗೆ ಕಾರ್ಯಕ್ರಮದ ಬಗ್ಗೆ ತಿಳಿದಾಗ, ಇದರ ಬಗ್ಗೆ ನಿಜಕ್ಕೂ ನನಗೆ ಗೊತ್ತಿರಲಿಲ್ಲ.  ಸುಮಾರು 15 ವರ್ಷಗಳಿಂದ ಹಿಂದೆ 2004 ರಲ್ಲಿ ನಾವು ಚಕ್ರವರ್ತಿಯವರ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದೆವು.  ಅದಕ್ಕೂ ಮೊದಲೇ ನಮ್ಮೂರು ಮತ್ತೂರಿನಲ್ಲೂ ಸಾಕಷ್ಟು ಕಾರ್ಯಕ್ರಮ ನಡೆದಿತ್ತು. ಆಗಿನಿಂದಲೂ ಅಭಿಮಾನವಿರುವ ನನಗೆ, ಚಕ್ರವರ್ತಿಯವರು ಇರುತ್ತಾರೆ ಎಂಬ ಒಂದೇ ಕಾರಣಕ್ಕೆ ನಾನು ಹೋಗಿದ್ದು. ಅಷ್ಟರ ಮಟ್ಟಿಗೆ ನಾನು ಅನಪೇಕ್ಷಿತನೇ !

ಇದೊಂದು ಅದ್ಭುತ ಐಡಿಯಾ! ನಮ್ಮಲ್ಲಿ ಎಷ್ಟೋ ಜನರಿಗೆ, ಏನೋ ಸಾಧಿಸಬೇಕು ಅನ್ನುವ ಹುಮ್ಮಸ್ಸು, ಮನಸ್ಸು ಇರುತ್ತದೆ, ಆದರೆ ಅದಕ್ಕೆ ಒಂದು ಗುರಿ ಹಾಗು ಗುರು ಸಿಗುವುದು ಕಷ್ಟ! ವೇದಿಕೆ, ಸ್ಟಾರ್ಟ್ ಅಪ್  ಸಾಧಕರನ್ನು ಕರೆ ತಂದು, ಅವರ ಅನುಭವವನ್ನು ಎಳೆಯ ಮನಸ್ಸುಗಳಿಗೆ ಹುರಿದುಂಬಿಸುವ ಕಾರ್ಯಕ್ರಮ ಇದು (Business Conclave). ಇಲ್ಲಿ ಇದ್ದವರೆಲ್ಲಾ ಏನಾದರೂ ಸಾಧಿಸಬೇಕು ಅನ್ನುವ ಮನಸ್ಸನ್ನು ಹೊಂದಿದ್ದ ಯುವಕ ಯುವತಿಯರೇ

ಉದ್ಘಾಟನೆಗೆ ಪಬ್ಲಿಕ್ ಟಿವಿ ರಂಗನಾಥ್ ಬಂದಿದ್ರು. ಅವರು ತಮ್ಮ ಅನುಭವ ಬುತ್ತಿ ಬಿಚ್ಚಿ, ನಿಮಗೆ ಒಂದು Passionಒಂದು Cohesive Team ಮತ್ತು ಅವಶ್ಯಕ-ಅನವಶ್ಯಕ ಖರ್ಚುಗಳ ನಡುವಿನ ವ್ಯತ್ಯಾಸ ತಿಳಿದಿರಬೇಕು ಅನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರುಒಂದು ಟಿವಿ ಚಾನೆಲ್ ಶುರು ಮಾಡಲು 60-70 ಕೋಟಿ ಖರ್ಚಾಗುತ್ತಿದ್ದ ಕಾಲದಲ್ಲಿ ಪಬ್ಲಿಕ್ ಟಿವಿ ಶುರುಮಾಡಿದಾಗ ಹಾಕಿದ ಬಂಡವಾಳ 7 ಕೋಟಿ !

ಅದಾಗಲೇ ಬಳಸಿದ ಆದರೆ ಉಪಯೋಗಿಸಲು ಯೋಗ್ಯವಾದ ಕ್ಯಾಮೆರಾ ಸಹಿತ ಬಹುತೇಕ ಎಲ್ಲ ಉಪಯುಕ್ತವಾದ ವಸ್ತುಗಳನ್ನು ದೇಶಾದ್ಯಂತ ಸಂಚರಿಸಿ, ಸಂಗ್ರಹಿಸಿ, ಕಟ್ಟಿದ ಪಬ್ಲಿಕ್ ಟಿವಿಯ ಕಥೆ ಒಂದು ಪ್ರೇರಣೆಯೇ ಸರಿ. ಇವರು ಕೂರುವ ಕುರ್ಚಿ ಕೂಡ ಸೆಕೆಂಡ್ ಹ್ಯಾಂಡ್! ಒಂದು ಕಿವಿ ಮಾತು ಹೇಳಿದ ಅವರು ದಯವಿಟ್ಟು ನಿಜ ಹೇಳಿ, ಗಡಿಯಾರ ನೋಡಿ ದುಡಿಯುವುದನ್ನು ಬಿಡಿ, ಕೆಲಸ ಮುಗಿಯುವ ವರೆಗೆ ದುಡಿಯಿರಿ! ಹಾಗೆಯೇ ನಿಮಗೇನಾದರೂ ನಿಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳಲು ಕಿವಿಗಳು ಸಿಗದಿದ್ರೆ, ನಾನು ಯಾವಾಗಲೂ ಸಿದ್ಧ ಅಂತ ಭರವಸೆ ಕೊಟ್ರು!

ನಂತರ ಚಾರ್ಟರ್ ಅಕೌಂಟೆಂಟ್ ಮೋಹನ್ ಕುಮಾರ್ ಮಾತನಾಡಿ, ಸ್ಟಾರ್ಟ್ ಅಪ್  ಬಗ್ಗೆ ಮೊದಲ ದಿನವೇ ಎವಲ್ಯೂಯೇಷನ್ ಮಾಡುವುದು ತಪ್ಪು, ಮಾರ್ಕೆಟ್ ಬಗ್ಗೆ ಗಮನವಿರಲಿ, ಡೆವಲಪಿಂಗ್ ದೇಶಗಳಲ್ಲಿ ಬೇಡಿಕೆ ಜಾಸ್ತಿ, ಹಾಗಾಗಿ ದೇಶಗಳ ಮಾರ್ಕೆಟ್, ಕನ್ಸೂಮರ್ ಸೈಕೊಲಾಜಿ ನೋಡುವುದನ್ನು ಬೆಳಸಿಕೊಳ್ಳಿ ಅನ್ನುವ ಸಲಹೆ ಕೊಟ್ಟರು.  

ಸದಾನಂದ ಮಯ್ಯ ಓದಿದ್ದು ಇಂಜಿನಿಯರಿಂಗ್, ಆದರೆ ಮಾಡಿದ್ದು ಹೋಟೆಲ್ ಬಿಸಿನೆಸ್. ಒಳ್ಳೆಯ ಕ್ರಿಕೆಟ್ ಆಟಗಾರ, ಜಿ ಆರ್ ವಿಶ್ವನಾಥ್ ಜೊತೆ ಆಡುತ್ತಿದ್ದವರು. ಅವರು ತಿಳಿಸಿದ  ABCD ನಿಜಕ್ಕೂ ಶ್ಲಾಘನೀಯ. A - Attitude, B - Belief, C - Confidence,  D - Dream. 

1976 ರಲ್ಲಿ ಸರ್ಕಾರ ದೋಸೆಗೆ ಇಷ್ಟೇ ದರ ವಿಧಿಸಬೇಕು ಅನ್ನುವ ಕಾನೂನು ತಂದಿತು. ಅದಕ್ಕೆ MTR  ವಿರೋಧಮಾಡಿ ಹೋಟೆಲ್ ಮುಚ್ಚಿದರು. ಆಗ ಶುರು ಮಾಡಿದ್ದೇ MTR Retail ಅಂಗಡಿ. ಅಲ್ಲಿ ಮೊದಲೇ ಸಿದ್ಧಪಡಿಸಿದ ಪ್ಯಾಕೇಜ್ ಫುಡ್ ಮಾರಲು ಶುರುಮಾಡಿದರು. ಹೀಗಾಗಿ  ರಿಟೇಲ್ ಅಂಗಡಿಗಳು (outlets) ಶುರು ಆದ್ವು. ವಾಷಿಂಗ್ ಮಷೀನ್ ಭಾರತಕ್ಕೆ ಬಂದ ಹೊಸದರಲ್ಲಿ, ಪಂಜಾಬ್ ನಲ್ಲಿ ಒಬ್ಬ ಇದನ್ನು ಲಸ್ಸಿ ಮಾಡುವ ಯಂತ್ರವಾಗಿ ಮಾರಿದ್ದನ್ನು ಮಯ್ಯ ನೆನಪಿಸಿ, ಹೊಸ ಹೊಸ ಆಲೋಚನೆಯೊಂದಿಗೆ ಮಾರ್ಕೆಟಿಂಗ್ ಮಾಡಬೇಕು ಅನ್ನುವ ಸಲಹೆ ನೀಡಿದರು.

1998ರಲ್ಲಿ ಮಯ್ಯ ಅವರಿಗೆ ಒಂದು ದೂರವಾಣಿ ಕರೆ ಬಂತು ದೆಹಲಿಯಿಂದ. ಮಯ್ಯ ದೆಹಲಿ ತಲಪಿದ್ದು ರಾತ್ರಿ 8.30ಕ್ಕೆ, ದೂರವಾಣಿ ಕರೆ ಮಾಡಿದ್ದವರು ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾoಡೀಸ್!! ಮಯ್ಯ ಅವರು ತಲಪಿದ್ದು ಪ್ರಧಾನ ಮಂತ್ರಿ ಅಟಲ್ ಜಿ ಅವರ ಮನೆಗೆ! ಅಲ್ಲಿಗೆ ಅಬ್ದುಲ್ ಕಲಾಂ ಕೂಡ ಬಂದಾಗಿತ್ತು! ಅವರು ಪ್ರಸ್ತಾಪಿಸಿದ್ದು, ಸೈನಿಕರು ಹೊತ್ತು ಒಯ್ಯುವ ಒಂದು ದಿನದ ಬ್ಯಾಗ್ ಬಗ್ಗೆ! ಬ್ಯಾಗ್ ನಲ್ಲಿ ಒಂದು ದಿನಕ್ಕೆ ಬೇಕಾಗುವ ಊಟ, ನೀರು, ಕಾಫಿ, ಟೀ, ಹಾಲು ಇರುತ್ತದೆ. ಅದರ ತೂಕ 27 ಕೆಜಿ, ಅದನ್ನು 10 ಕೆಜಿ  ಇಳಿಸಿಕೊಡಬೇಕು ಅಂದರೆ 17ಕೆಜಿಗೆ ಅನ್ನುವ ಮಹತ್ವದ ವಿಚಾರ! ಇದಕ್ಕೆ ಕೊಟ್ಟ ಅವಧಿ ಹದಿನೈದು ದಿನ. ಮಯ್ಯ ಬ್ಯಾಗ್ ತೂಕವನ್ನು 27 ಕೆಜಿ ಇಂದ 11 ಕೆಜಿ ಗೆ ಇಳಿಸಿದರು! ಇದಕ್ಕೆ MTR ಗ್ರೀನ್ ಬ್ಯಾಗ್ ಅನ್ನುವ ನಾಮಕರಣ ಮಾಡಿದರು. ಹೀಗೆ ಅವರ ಸಾಫ್ಟಿ ಐಸ್ ಕ್ರೀಮ್ ಅನುಭವ ಕೂಡ ಹಂಚಿಕೊಂಡ್ರು. 

ಲೆಫ್ಟಿನೆಂಟ್ ಕೆಪಿ ನಾಗೇಶ್ - ಈತ ಯುನಿಕ್ ಡೆಟೆಕ್ಟಿವ್ ಮತ್ತು ಸೆಕ್ಯುರಿಟೀಸ್ ಶುರು ಮಾಡಿ ಯಶಸ್ಸು ಕಂಡವರು. ಇವರು ಹೇಳಿದ ವೇದ ವಾಕ್ಯ, ‘ನೀವು  ಸ್ಟಾರ್ಟ್ ಅಪ್ ಶುರು ಮಾಡಿದರೆ, ದುಡುಕು, ಸಿಡುಕು, ಕೆಡಕು ದೂರವಿಡಿ’, Attitude  decides  the  Altitude  of  the  person  ಅಂದ್ರು. ಈತ ಸೆಕ್ಯುರಿಟೀಸ್ ಉದ್ಯಮವನ್ನು ಇನ್ನೂರು ಕೋಟಿಗೆ ಬೆಳಿಸಿದ್ದಾರೆ! ಗ್ರಾಮದ ಹಿನ್ನಲೆ ಇಂದ ಬಂದ ಇವರು, ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಕಾರ್ಯ ಮಾಡುತ್ತಲಿದ್ದಾರೆ.

ನಂತರದ ಸರತಿ ಸತ್ಯಶಂಕರ್ ಭಟ್, ಅಲಿಯಾಸ್ ಬಿಂದು (Bindu Soda) ಭಟ್ಟದ್ದು! ಇವರು ಹುಟ್ಟಿದ್ದು ಪುತ್ತೂರಿನ ಬಳಿಯ ಹಳ್ಳಿಯಲ್ಲಿ. ಇವರದು ತುಂಬಿದ ಬ್ರಾಹ್ಮಣ ಮಡಿವಂತ ಕುಟುಂಬ. ಒಟ್ಟು ಒಂಬತ್ತು ಮಕ್ಕಳು. ಇವರ ಅಣ್ಣಂದಿರು ಓದಿ ಕೆಲಸವಿಲ್ಲದೆ ಅಲೆಯುತ್ತಿದ್ದದ್ದನ್ನು ನೋಡಿ, ತಂದೆಯವರು ಇವರ ಓದನ್ನು SSLC ಗೆ ನಿಲ್ಲಿಸಿದರು. ಈತ ಮನೆಯವರ ಮಾತಿಗೆ ವಿರುದ್ಧವಾಗಿ, ಆಟೋ ಇಟ್ಟರು. ಅದನ್ನು ಮಾರಿ ಅಂಬಾಸಿಡಾರ್ ಕಾರ್ ಇಟ್ರು, ಆಟೋಮೊಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ ಇಟ್ರು, ನಂತರ ಆಟೋಮೊಬೈಲ್ ಫೈನಾನ್ಸ್ ಕಂಪನಿ ತೆರೆದರು.  ಎಲ್ಲದರಲ್ಲೂ ಯಶಸ್ವಿ ಆದ್ರು

ಆದರೆ ಗ್ರಾಮದ ಯುವಕರಿಗೆ ಕೆಲಸ ಕೊಡುವ, ಅವರನ್ನು ಅಲ್ಲಿಯೇ ಉಳಿಸಿಕೊಳ್ಳುವ ಕೆಲಸ ಮಾಡಬೇಕೆಂಬ ಮಹದಾಸೆ ಇಂದ, ಅವರ ತೋಟದಲ್ಲಿ ಇದ್ದ ಸಿಹಿನೀರಿನ್ನುಬಾಟಲ್ ಮಾಡಿ ಮಾರುವ ಕಾರ್ಯಕ್ಕೆ ಅಡಿ ಇಟ್ಟರು, ನಂತರದ ಅವಿಷ್ಕಾರವೇ ಬಿಂದು ಸೋಡಾ!! ಇದು ಯಾವ ಮಟ್ಟದ ಸಂಚಲನ ಉಂಟು ಮಾಡಿತೆಂದರೆ, ಇವರ ಉದ್ಯಮ ಐದು ಕೋಟಿ ತಲಪಿದಾಗ, ಕೋಕಾಕೋಲಾ ಕಂಪನಿಯವರು ಐವತ್ತು ಕೋಟಿ ಕೊಟ್ಟು ಕೊಂಡುಕೊಳ್ಳಲು ಬಂದ್ರೂ, ೫೦೦ ಕೋಟಿ ಉದ್ಯಮವನ್ನಾಗಿ ಮಾಡುತ್ತೇನೆಯೇ ಹೊರತು ಮಾರುವುದಿಲ್ಲ ಎಂದು ಅದನ್ನು ಮಾರಲಿಲ್ಲ! ಈಗ ಉದ್ಯಮ 500 ಕೋಟಿಯನ್ನೂ ಮೀರಿ ತಲುಪಿದೆ. ಬೇರೆ ಬೇರೆ ದೇಶಕ್ಕೂ ಬಿಂದು ಸೋಡಾ ರಫ್ತಾಗುತ್ತಿದೆ! ಇವರು ಒಂದುಸಾವಿರ ಜನಕ್ಕೆ ಹಳ್ಳಿಯಲ್ಲಿ ಕೆಲಸ ಕೊಟ್ಟಿದ್ದಾರೆ! ಇವರ ಆಟೋಮೊಬೈಲ್ ಫೈನಾನ್ಸ್ ಕೂಡ 200 ಕೋಟಿ ತಲಪಿದೆ!


ಮುಂದುವರೆಯುವುದು...


No comments:

Post a Comment