Aug 21, 2012

ಕಾಂಗ್ರೆಸ್ ನಲ್ಲಿ ಉತ್ತಮ ನಾಯಕರ ಕೊರತೆಯ ಸಾಬೀತು...


ಕರ್ನಾಟಕದ ಕಾಂಗ್ರೆಸ್ ನಲ್ಲಿ ಉತ್ತಮ ನಾಯಕರಿಲ್ಲ ಎಂಬುದನ್ನು ಪದೇ ಪದೇ ನಿರೂಪಿಸುತ್ತ ಬಂದಿರುವ ಪರಮೇಶ್ವರ್ ರವರು ರಾಜ್ಯದಲ್ಲಿನ ಪ್ರತಿಯೊಂದು ಸನ್ನಿವೇಶಕ್ಕೂ ಮನಬಂದಂತೆ ಮಾತಾಡುತ್ತಿರುವುದು ಪರಮೇಶ್ವರ್ ರವರಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನೂ ಸಾಬೀತು ಪಡಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಡ್ವಾಣಿಯವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ ತಮ್ಮ ಯೋಗ್ಯತೆ ಏನು ಎಂಬುದನ್ನು ತೋರಿಸಿದ್ದ ಪರಮೇಶ್ವರ್, ಆ ನಂತರ ಅವರ ಹೆಸರಿನ ಜೊತೆ ಡಾಕ್ಟರ್ ಎಂದು ಸೇರಿಸಲು ಯೋಚನೆ ಮಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಈ ಸಮಯದಲ್ಲಿ ತಮ್ಮ ಬಾಯಿಗೆ ಇಂಟರ್ವಲ್ ಸಹ ಕೊಡದೆ ಪರಮೆಶವರ್ ರವರು ಮತ್ತೊಮ್ಮೆ ಸುದ್ದಿಯಾಗಿ, ಸಣ್ಣವರಾಗಿದ್ದಾರೆ. 

ಇಡೀ ದೇಶದಲ್ಲಿ ಎಲ್ಲೇ ಅವಘಡ ಸಂಭವಿಸಿದರೂ ಮೊದಲು ಅಲ್ಲಿಗೆ ಹೋಗುವುದು ಆರೆಸ್ಸಸ್ ನ ಕಾರ್ಯಕರ್ತರು. ಇದನ್ನು ಪ್ರತ್ಯಕ್ಷ ನೋಡಿದವರಿಗೋ ಅಥವಾ ಪ್ರತ್ಯಕ್ಷ ಅನುಭವಿಸಿದವರಿಗೋ ಗೊತ್ತು. ಯಾಕೆಂದರೆ ಆರೆಸ್ಸಸ್ ಮಾಡುವ ಯಾವ ಕೆಲಸಗಳೂ ನಮ್ಮ ಮಾಧ್ಯಮದವರಿಗೆ ವಿಶೇಷವೂ ಅಲ್ಲ ಸುದ್ದಿಯೂ ಅಲ್ಲ. ಬಹುಶಃ ಅದು ಆರೆಸ್ಸೆಸ್ಸಿನವರ ಕರ್ತವ್ಯ ಎಂದೇ ಅವರು ಭಾವಿಸಿ ಸುಮ್ಮನಿರುತ್ತಾರೆ. ಅದು ನಿಜವೂ ಹೌದು. ಇಲ್ಲಿ ಆದದ್ದೂ ಅದೇ. 

ಸದ್ಯದ ರಾಜ್ಯದ ಬ್ರೇಕ್ ನ್ಯೂಸ್ ಆದ ಅಸ್ಸಾಮೀಯರ ವಲಸೆಯನ್ನು ನಿಯಂತ್ರಿಸಲು ಮತ್ತು ಅವರಿಗೆ ಧೈರ್ಯ ತುಂಬಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಅತ್ಯಂತ ಸಹಜವಾಗಿಯೇ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಈ ಕೆಲಸವನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರದ 'ಪೋಲೀಸ್ ವ್ಯವಸ್ಥೆಯ ವೈಫಲ್ಯ' ಎಂದು ನಾಮಕರಣ ಮಾಡಿ ಪುರೋಹಿತರಾಗಹೊರಟಿದ್ದಾರೆ ಪರಮೇಶ್ವರ್. ಇಂತಹ ಕೆಲಸದ ಬಗ್ಗೆಯೂ ತಮ್ಮ ಸಣ್ಣ ಸಣ್ಣ ಮಾತುಗಳನ್ನು ಹರಿಬಿಟ್ಟಿರುವುದು ರಾಜ್ಯ ಕಾಂಗ್ರೆಸ್ ನಲ್ಲಿ ಯೋಗ್ಯ ನಾಯಕರ ಕೊರತೆಯನ್ನು ಎತ್ತಿ ಹಿಡಿದಿದೆ. 


ಪ್ರತಿಯೊಂದಕ್ಕೂ ರಾಜ್ಯ ಸರ್ಕಾರವನ್ನು ತೆಗಳುವ ಚಟದಲ್ಲಿ ಮಗ್ನರಾಗಿರುವ ಹಲವಾರು ತಲೆಲೆಕ್ಕಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಮಾತಾಡುವ ಮುಂಚೆ ಪರಮೇಶ್ವರರ ಮೆದುಳು ಕೆಲಸ ಮಾಡಲೆಂದು ಅವರವರ ದೇವರಲ್ಲಿ ಪ್ರಾರ್ಥಿಸುವುದು ರಾಜ್ಯ ಕಾಂಗ್ರೆಸ್ ನ ಹಿತದೃಷ್ಟಿಯಿಂದ ಹಾಗು ಅವರ ಹಿತದೃಷ್ಟಿಯಿಂದ ಒಳ್ಳೆಯದು ಎನ್ನುವುದು ಒಳ್ಳೆಯ ಸಲಹೆಯಾಗುವುದರಲ್ಲಿ ಸಂಶಯವಿಲ್ಲ. 

ಇನ್ನೇನು ಜಿ.ಪರಮೇಶ್ವರ್ ತಮ್ಮ ಮೇಡಮ್ಮರನ್ನು ಸಿಕ್ಕಾಪಟ್ಟೆ ಖುಷಿ ಪಡಿಸಿದರು ಅನ್ನುವಷ್ಟರಲ್ಲೇ ತಾನೇನು ಕಡಿಮೆ ಎನ್ನುವಂತೆ ಸ್ಪರ್ಧೆಗೆ ಬಂದರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ ಕೆ ಹರಿಪ್ರಸಾದ್. ಆರೆಸ್ಸೆಸ್ ನ ಬಗ್ಗೆ 'ಬೇ''ಕಾ'ಬಿಟ್ಟಿ 'ಹರಿ'ಬಿಟ್ಟಿರುವ ಹರಿಪ್ರಸಾದರು 'ನಾವು ಕಾಂಗ್ರೆಸ್ಸಿನವರೆಲ್ಲ ಹೀಗೆಯೇ' ಎಂದು ಆಡಿ ತೋರಿಸಿದ್ದಾರೆ. ಅಸ್ಸಾಮೀಯರು ವಾಪಸ್ ಹೋಗುವಂತೆ ಮಾಡುತ್ತಿದ್ದ ಎಸ್ಎಂಎಸ್ ಗಳ ಹಿಂದಿನ 'ಕೈ'ಗಳು ಪಾಕಿಸ್ತಾನದಲ್ಲಿವೆ ಎಂದು ತನಿಖೆಗಳಿಂದ ಹೊರಬರುತ್ತಿದ್ದರೂ ಕಾಂಗ್ರೆಸ್ಸಿನ 'ಕೈ' ಗಳು ಮಾತ್ರ ಸುಮ್ಮನಾದಂತಿಲ್ಲ. ಕಾಂಗ್ರೆಸ್ಸಿನ ಅವನತಿ ಶುರುವಾದಂತೆಯೇ. 

1 comment:

  1. This got published in kannada.oneindia.in

    http://kannada.oneindia.in/response/2012/parameshwar-proves-congress-lacks-leadership-067478.html

    ReplyDelete