Mar 10, 2011

ವಿಶ್ವ ಸಂಸ್ಕೃತ ಪುಸ್ತಕ ಮೇಳ : ಉತ್ತಮ ಜಾಗೃತಿ

ಬಹಳ ದಿನಗಳಿಂದ ಬರೆಯಬೇಕು ಎಂದುಕೊಡಿದ್ದರೂ ಆಗಿರಲಿಲ್ಲ. ಸಮ್ಮೇಳನ ನಡೆದ ಬಹಳ ದಿನಗಳ ನಂತರ ಬರೆಯುತ್ತಿದ್ದೇನೆ.
'ವಿಶ್ವಸಂಸ್ಕೃತ ಪುಸ್ತಕ ಮೇಳ' ನಡೆದದ್ದು ಜನವರಿ ೭ ರಿಂದ ೧೧ ರ ವರೆಗೆ. ನಾವು ಸಂಸ್ಕೃತ ಗ್ರಾಮದ 'ಕೈಲಾಗದ' ಪ್ರಜೆಗಳಾಗಿರುವ ಕಾರಣ ಹಾಗು ಬರದಿರುವವರ ಮುಂದೆ ಸಂಸ್ಕೃತ ಮಾತನಾಡಲು ಬರುವ ಕಾರಣ ನಾನು ಸಹ ಮೇಳವನ್ನು ನೋಡಲು ಹೋಗಿದ್ದೆ.


ಅಲ್ಲಿ ಕಾದಿತ್ತು ಅಚ್ಚರಿ ಹಾಗು ಸಂತೋಷ. 'ಮೃತ ಭಾಷೆ' ಎಂದು ಕೆಲ ಬುದ್ದಿ(ಇಲ್ಲದ)ಜೀವಿಗಳು ಮೂದಲಿಸುವ ಸಂಸ್ಕೃತಕ್ಕೆ ಸಂಬಧಿಸಿದ ಒಂದು ಸಮ್ಮೇಳನಕ್ಕೆ ಬಂದ ಜನಸಾಗರ ವನ್ನು ನೋಡಿ ನಿಜವಾಗಲು ಎಷ್ಟು ಆಶ್ಚರ್ಯ ಆಯ್ತು ಅಂದರೆ ಎಲ್ಲೂ ಸರಿಯಾಗಿ ಜಾಗವಿಲ್ಲದನ್ನು ನೋಡಿ ವಾಪಸ್ ಮನೆಗೆ ಹೊಗುವಂತಾಗಿತ್ತು. ಪುಸ್ತಕ ಮಳಿಗೆ ಗಳಲ್ಲಿ ಕೊಂಡುಕೊಳ್ಳುವು ದಿರಲಿ , ಪುಸ್ತಕಗಳನ್ನು ನೋಡಲೂ ಸಾಧ್ಯವಾಗಲಿಲ್ಲ ಆ ಜನ ದಟ್ಟಣೆಯಲ್ಲಿ.



ಆದರೆ ಒಂದು ಉತ್ತಮ ವಾತಾವರಣವನ್ನು ಹಾಗು ಸಂಸ್ಕೃತ ಭಾಷೆಯ ಬಗ್ಗೆ ಜಾಗೃತಿಯನ್ನು ಉಂಟು ಮಾಡುವಲ್ಲಿ ನಡೆದ ಪುಸ್ತಕ ಮೇಳ ಖಂಡಿತ ಪರಿಣಾಮಕಾರಿಯಾಯಿತು ಎಂಬುದು ನನ್ನ ಅಭಿಪ್ರಾಯ. ಆ ಸಲುವಾಗಿನ ನೆನಪಿಗೋಸ್ಕರ ಕೆಲ ಭಾವ ಚಿತ್ರಗಳನ್ನು ನನ್ನ ಬ್ಲಾಗುಸ್ತಕ ದಲ್ಲಿ ಹಿಡಿದಿಡುವ ಪ್ರಯತ್ನ ವಷ್ಟೇ.


ನಾನು ಮತ್ತೂರಿನವನು ಎಂದು ಹೇಳಿದ ತಕ್ಷಣ 'ಸಂಸ್ಕೃತ ಬರುತ್ತಾ?' ಎಂದು ಕೇಳುವವರೇ ಹೆಚ್ಚು. ಬರುತ್ತೆ ಎಂದು ಹೇಳುವುದರಲ್ಲಿ ನಮಗೆ ಹೆಮ್ಮೆ ಇದೆ.











ಸಾಮಾನ್ಯವಾಗಿ ಯಾರಿಗೆ ದೇಶದ ಬಗೆಗೆ ಅಭಿಮಾನ, ಶ್ರಧ್ಧೆಗಳು ಪ್ರಾಮಾಣಿಕವಾಗಿರುತ್ತದೋ ಅಂತಹ ಮೂರ್ಖರಿಗೆ ಸಂಸ್ಕೃತದ ಬಗ್ಗೆ ಸ್ವಲ್ಪವಾದರೂ ಹೆಮ್ಮೆ ಇದ್ದೇ ಇರುತ್ತದೆ. ನಮ್ಮ ದೇಶಕ್ಕೆ ತನ್ನದೇ ಆದ ಹಿರಿಮೆಗಳಿರುವುದರ ಕಾರಣಗಳಲ್ಲಿ ಸಂಸ್ಕೃತ ಭಾಷೆಯೂ ಒಂದು. ಸಂಸ್ಕೃತದ ಬಗ್ಗೆ ಶ್ರದ್ಧಾ-ಗೌರವಗಳನ್ನು ಆಚರಿಸುವುದು ನಮ್ಮ ಕರ್ತವ್ಯವೂ ಹೌದು.

No comments:

Post a Comment