Mar 8, 2009

ಎಲ್ಲ ಮಾಧ್ಯಮದವರಿಗೆ ಬೇಕು ನೈತಿಕತೆ ಮತ್ತು ರಾಷ್ಟ್ರೀಯತೆ


ರಾಷ್ಟ್ರೀಯ ಸುದ್ಧಿವಾಹಿನಿಗಳ ಬಹುತೇಕ ಚಂದಾದಾರರಿಗೆ ಹುತಾತ್ಮನಾದ ಉನ್ನಿಕೃಷ್ಣನ್ ಗೊತ್ತಿಲ್ಲದಿದ್ದರೂ 'ಪ್ರಮೋದ್ ಮುತಾಲಿಕ್ ' ಗೊತ್ತೇಯಿರುತ್ತಾರೆ. ಆ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ, ರಾಷ್ಟ್ರೀಯ ಮಟ್ಟದಲ್ಲಿ ಪುಕ್ಕಟೆ ಪ್ರಚಾರ ಗಿಟ್ಟಿಸಿದ್ದಾರೆ ಪ್ರಮೋದ್ ಮುತಾಲಿಕ್!

ಮಂಗಳೂರಿನಲ್ಲಿ ಪಬ್ ದಾಳಿ ನಡೆಯುತ್ತಿದೆ ಎಂದು ತಿಳಿದ ಮರುಕ್ಷಣದಲ್ಲೇ ತಮ್ಮ ಸಕಲ ಸಿದ್ದತೆಗಳೊಂದಿಗೆ ಧಾವಿಸಿದ ಪತ್ರಕರ್ತರು, ಮಾಧ್ಯಮದವರು ತಮ್ಮ 'ಬಿಜೆಪಿ ವಿರೋಧೀ' ನಿಲುವಿನ ಸಮರ್ಥನೆಗೆ ಉತ್ತಮ ವಿಷಯ ಸಿಕ್ಕಿತು ಎಂಬ ವಿಕೃತ ಸಂತೋಷದಿಂದ ದಾಳಿಯನ್ನು ರಾಷ್ಟ್ರೀಯ ಸುದ್ದಿಯನ್ನಾಗಿಸಿದರು. ಮುತಾಲಿಕ್ ಗೆ ಅತ್ಯಂತ ಅಬ್ಬರದ ಪ್ರಚಾರ ನೀಡಿ ಅವರನ್ನು ರಾಷ್ಟ್ರಮಟ್ಟದಲ್ಲಿ ಸುದ್ದಿಯನ್ನಾಗಿಸಿದರು. ಹಾಗು ವಿವಾದವನ್ನು ಅಂತರರಾಷ್ಟ್ರೀಯ ಮಟ್ಟಕ್ಕೂ ತೆಗೆದುಕೊಂಡು ಹೋಗುವ ಅತ್ಯಂತ ಪ್ರಾಮಾಣಿಕ ಪ್ರಯತ್ನವನ್ನೂ ಮಾಡಿದರು!

ಈ ರೀತಿಯಲ್ಲಿ ನಮ್ಮ ದೇಶದ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಕೇವಲ ಹತ್ತನೇ ತರಗತಿಯವರೆಗೆ ಓದಿದ ಸಾಮನ್ಯ ವಿದ್ಯಾರ್ಥಿಯೂ ಕೂಡ ಯಾವುದೇ ಪತ್ರಿಕೆಯನ್ನ ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಪತ್ರಿಕೆಯನ್ನ ಓದಿದ ತಕ್ಷಣವೇ ಹೇಳಬಲ್ಲ, ಪತ್ರಿಕೆ ಯಾವ ಪಕ್ಷದ ಪ್ರತಿನಿಧಿ ಎಂದು!

ವರದಿ ನಿಡುವ ಮೊದಲು ತಾನು ನೀಡುವ ವರದಿ ಸಮಾಜಕ್ಕೆ ಹಿತಕಾರಿಯೋ ಅಲ್ಲವೋ ಎಂದು ಯೋಚಿಸುವ ಅಥವಾ ಪೂರ್ಣ ಸತ್ಯವನ್ನೇ ತನ್ನ ನಿಲುವಾಗಿಸಿಕೊಂಡ ಪ್ರಾಮಾಣಿಕ ಪತ್ರಕರ್ತರ ಅವಶ್ಯಕತೆ ಈ ಸಮಾಜಕ್ಕೆ ಖಂಡಿತ ಇದೆ. ತಾನು ಬರೆಯುವ ಲೇಖನದ ಹಿಂದೆ ಉತ್ತಮ ಸಮಾಜ ನಿರ್ಮಾಣದ ಉದ್ದೇಶವಿಲ್ಲದ ಪತ್ರಕರ್ತ ಹೇಗೆ ತಾನೇ ದೇಶದ ಆಸ್ತಿಯಾಗುತ್ತಾನೆ?

ತನ್ನ ವೃತ್ತಿಯಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕ, ಉಜ್ವಲ ರಾಷ್ಟ್ರೀಯತೆಯ ಅಭಿವ್ಯಕ್ತಿಯಿಂದ ಮಾತ್ರ ಪತ್ರಕರ್ತರು ಸುಧ್ರುಢ ರಾಷ್ಟ್ರ ನಿರ್ಮಾಣದ ಮಹತ್ಕಾರ್ಯದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಲು ಸಾಧ್ಯ.

ರಾಷ್ಟ್ರದ ಸತ್ಪ್ರಜೆಯಾಗದ ಹೊರತು ಸತ್ಪತ್ರಕರ್ತನಾಗಲು ಸಾಧ್ಯವಿಲ್ಲ.

1 comment: